ಎಲ್ಲೋ ಒಂದು ಕಡೆ
ಗಟ್ಟಿಯಾಗಿ ನೆಲೆಯೂರಿದ್ದೆ
ಸಿಡಿಮದ್ದುಗಳ ಸಿಡಿಸಿ
ತುಂಡಾಗಿಸಿದರು
ಯಂತ್ರಗಳ ನಡುವೆ ಸಿಕ್ಕು
ಸಮತಟ್ಟಾದೆ
ನಾಜೂಕುತನದಿ ಮನೆ,
ಮಠ,ಮಸೀದಿಗಳ ನೆಲಹೊಕ್ಕಿದೆ
ಮತ್ತಷ್ಟು ತುಂಡುಗಳು
ಉಳಿಯ ಅಳತೆಯೊಳಗೆ
ಊಳಿಗಕೆ ಬಿದ್ದು
ಕಲಾಕೃತಿಗಳಾದವು
ಕಪ್ಪು,ಬಿಳಿ,ಕಂದು ಬಣ್ಣಗಳ
ಜಾಡಿನಲಿ ಶಿಲೆಯಾಗಿ
ಮೂರ್ತಿಯಾಗಿ
ಗುಡಿಗಳಲಿ ರಾರಾಜಿಸಿದೆ
ಜಾತಿ, ಧರ್ಮ,ಮತವೆಂದು
ಹಿಂದೆ ಸರಿಯದೆ
ಸದ್ದಿಲ್ಲದೆ ಸರ್ವಧರ್ಮಕೂ
ಸಲ್ಲಿದೆ
ಲಿಂಗಭೇದ ಎನಗಿತ್ತೇ…?
ಧರ್ಮದ ಆಸರೆ ಎನಗಿತ್ತೇ…?
ಗುಡಿಸೇರಿ ಮಡಿಯಾದೆ
ಮಂಟಪಕೆ ಆಸರೆಯಾದೆ
ನಿರ್ಜೀವದ ಪದರಕೆ
ಪೂಜೆ,ಗೌರವ ಪಡೆದೆ
ಲಿಂಗ, ವರ್ಣಗಳಲ್ಲಿ ಬೆರೆತು
ಸೆರೆಯಾದೆ
ಧರೆಯ ಗಟ್ಟಿಗೆ ನಾನೇ ಜಟ್ಟಿ
ಆದರೇಕೋ ಮಾತಿನೊಳಗೆ
ಎಲ್ಲಾ ಲೊಳಲೊಟ್ಟೆ
ಧರೆ ಜಾರಲಿದೆ ಮೆತ್ತಗೆ
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…