ಬಹುದಿನಗಳ ಆಸೆ
ಸಿದ್ದಾರ್ಥನ ವಾಕ್ಯದಂತೆ
ಆಸೆಗಳ ಆಸರೆಯಿಲ್ಲದೆ
ಬದುಕಿನುದ್ದಕ್ಕೂ ಬದುಕಬೇಕೆನ್ನುವುದು!
ಇತಿಹಾಸದ ಪುಟಗಳಲ್ಲುಳಿಯಬೇಕು
ಯುದ್ಧ ಗೆದ್ದರು ಬಾಹುಬಲಿಯಂತೆ
ತುಂಡು ಬಟ್ಟೆಯಿಲ್ಲದ
ಜಾತಿ – ಧರ್ಮವನ್ನು ತ್ಯಜಿಸಿ
ಮಾನವೀಯತೆಯಿಂದ ಉಳಿಯಬೇಕು!
ನತದೃಷ್ಟನಾದರು ಪರವಾಗಿಲ್ಲ
ಇದ್ದರೆ ಇರಬೇಕು
ಕರುಣಾಮಯಿ ಕರ್ಣನಂತೆ
ಧರ್ಮ -ಅಧರ್ಮವೆನ್ನದೆ
ಸಮಯಕ್ಕಾದವರ ಸಹಾಯಕ್ಕೆ ಸದಾ!
ಸಾಹಸಿಯಂತೆ ಸೋತರು
ಚರಿತ್ರೆಯಲ್ಲಿ ಅಜರಾಮರ ಸದಾ!
ವರ್ತಮಾನದಲ್ಲಿ ಇವರದೆ ವಾರ್ತೆ
ಆಡು ಮುಟ್ಟದ ಸೊಪ್ಪಿಲ್ಲ
ಧೋನಿ ಎತ್ತದ ಕಪ್ಪಿಲ್ಲ
ಕ್ರಿಕೆಟ್ ಲೋಕ ಕಂಡ
ಅಪರೂಪದ ನಾಯಕನಂತೆ
ಬದುಕನ್ನು ಮುನ್ನಡಿಸೋಣ
ತಾಳ್ಮೆಯಿಂದ ಜಾಣ್ಮೆಯಿಂದ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
Good