ರಾತ್ರಿ ಬೆಲೆಯ ಗುಣಿಸುವ
ಗುಣಿಕಾರ
ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?
ಉಬ್ಬು ತಗ್ಗು
ಮುಟ್ಟಿ ಸವರಿ
ಕಚ್ಚಿ ಕಲೆ ಉಳಿಸಿ
ದುರ್ನಾತ ಬೀರಿ
ಕಕ್ಕುವವ ಹೇಗಾಗಬಲ್ಲ
ಅವ ನನ್ನ ಗೆಣೇಕಾರ ?
ಗಲ್ಲ ತೀಡಿ ಮುದ್ದು ಮಾಡಿ
ಅಚ್ಚೇ ದಿನ್ ಬರುವ ಕುರಿತು
ಆಶ್ವಾಸನೆ ನೀಡಿ
ಮುಗಿಲ ಕಡೆ ಮಾರಿ
ನೋಡುವಂತೆ ಮಾಡಿಹೋದವ
ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?
ಬೊಚ್ಚುಬಾಯಿ ಮುದುಕನ
ಮಾಸಿದ ನೋಟು
ಮೊಲೆಯ ಸಂದಿಗೆ ತುರುಕಿ
ಕಣ್ಣೆತ್ತಿ ನೋಡಿಯೂ ನೋಡದೆ
ಹೋದವ ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ವೈವಿಧ್ಯಮಯ ಸಾಹಿತ್ಯವಿದೆ
ಅದ್ಭುತವಾದ ಬರವಣಿಗೆ.