ಕವಿತೆಗಳು

ಎನ್ ನಂಜುಂಡಸ್ವಾಮಿ ಅವರು ಬರೆದ ಕವಿತೆ ‘ಹೀಗೊಂದು ಪಶ್ಚಾತಾಪ’

ಭ್ರಮಾಧೀನ ಕನಸುಗಳ ಬೆನ್ನೇರಿ
ಹೊರಟ ಆ ದಿನಗಳ ಸಂಭ್ರಮವೇನು?
ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ
ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ
ಪುರಾತನ ಯುಗದ ಕಲ್ಲುಗಳೆಷ್ಟು?
ಕಲ್ಲೇಕೆ ಬೆಂಕಿಯನೂ ನುಂಗಿ ಕಲ್ಲನೂ ಅಗಿದು
ಓಡುವೆನೆಂಬ ಪ್ರಾಯದ ಅಮಲು ಕುದುರೆಯನು
ಚಾಟಿಯಿಂದ ಹೊಡೆದು ನಿಲ್ಲಿಸಲು ಪ್ರಯತ್ನಿಸಿದರೂ
ಸಿಗಲಿಲ್ಲ ಕಡಿವಾಣ.
ಹೇಳುತ್ತಿದ್ದೆ ಅಂದು ನಾ ಅಹಂ ಬ್ರಹ್ಮಾಸ್ಮಿ !

ಸಿಗದಿದ್ದಕ್ಕಲ್ಲವೆ ಹುಚ್ಚಾಗಿ ಓಡಿ ಒಂದೆಡೆ
ಜಾರಿ ಬಿದ್ದದ್ದು?
ಬಿದ್ದರೂ ಜಟ್ಟಿಯ ಗಾದೆಯಂತೆ
ಆತ್ಮವಿಶ್ವಾಸಕ್ಕೆ ಬಿತ್ತಲ್ಲ ಮರ್ಮಾಘಾತ !
ಅತಿ ವಿಶ್ವಾಸದ ಅಮಲಿನಲಿ
ಕಣ್ಣಿಗೇಕೆ ಕಾಣದಾಯ್ತು ಕಲ್ಲು ಮುಳ್ಳು ಒರಟು ನೆಲ?
ಕಟು ಕಹಿ ವಾಸ್ತವದ ಅರಿವಾದೊಡನೆ
ಅಹಂನ ತಳಪಾಯ ಕುಸಿಯಿತಲ್ಲ.

ಜ್ವಾಲಾಮುಖಿಯ ಬೆಟ್ಟವ ಹೊತ್ತೇ
ತೆವಳುತಿರುವೆ ಇನ್ನಾದರೂ ಸಿಡಿದು ಶಾಂತವಾಗಲೆಂದು.
ಸಿಡಿಯಲು ಆರೆ, ಹೊರಲು ಆರೆ
ಸಿಗಬಹುದೇ ನನಗೊಬ್ಬ ಗುರು ?
ಇಳಿಸಬಹುದೇ ನನ್ನ ತಲೆಯ ಭಾರ ?
ಕನಸುತ್ತಿರುವೆ ಬೀಳುವ ಒರಟು ನೆಲಕೆ ಮಳೆ !
ಬೀಳಬಹುದೇ ಮಂತ್ರಕೆ ಮಾವಿನ ಕಾಯಿ !

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago