ನಡೆಯುತ್ತಿದ್ದೇನೆ ಗುರಿ
ಇರದ ದಾರಿಯಲ್ಲಿ
ಈಗ ನಡೆಯೂ ಬೇಸರವಾಗಿದೆ
ಸೋಲು ನಡೆವ ಕಾಲಿಗೆ ಹೊರತು
ಹೋಗುವ ದಾರಿಗಲ್ಲ
ಅವರು ತಮ್ಮ ಗೆಲವಿನ
ಸಂಭ್ರಮದಲಿದ್ದಾರೆ
ನನಗೆ ಗೆಲುವೆ ಬೇಡ ವಾಗಿದೆ
ಬಿಟ್ಟು ಹೋದ ಮನಗಳು
ಕಿತ್ತು ತಿನ್ಜುವ ನೆನಪುಗಳು
ಅತ್ತಿಂದಿತ್ತ ಇತ್ತೊಂದತ್ತ
ಸುಳಿವ ಪ್ರೇತಾತ್ಮ
ನಿತ್ಯ ಅಳುವದನು ಯಾವ
ಒಂಟಿಮನಕೂ
ಯಾರೂ ಹೇಳಿಕೊಡಬೇಕಿಲ್ಲ
ನಡೆದಿತ್ತು ಇಲ್ಲಿಯೂ ನಿತ್ಯ ಜಾತ್ರೆ
ಗುಡಿಕಟ್ಟಿ ಹೂಹಾರ ದೇವಳದ ಕಳಸಕ್ಕೆ
ದೇವರೇ ಹೋದ ಮೇಲೆ
ಹೂವಾಡಿಗನಿಗೇನುನಕೆಲಸ
ಹೂ ಬಿಟ್ಟಗಿಡಗಳೀಗ ನೀರಿಲ್ಲದನಾಥ
ಸತ್ತು ಹೋದ ಮಾತಿಗೆ ಅತ್ತರೇನು ಹೇಳಿ
ಕಿತ್ತು ಹೋದ ಉಂಗುಟವ ಹೊಲಿದು
ಅದೆಷ್ಟೊಂದು ಸಲ ಹಾಕುತ್ತಿ
ಅದೆಷ್ಟೊ ಸಲ ಓದಿರುವ ಮಾತುಗಳು
ಇನ್ನೊಂದು ತುಸು ದೂರ ನಡೆದಿದ್ದರೆ
ದೊರಕಬಹುದಿತ್ತೇನೋ ಗಮ್ಯ
ಆಡಲು ಸದಾ ಸಿದ್ದ ದಾರಿ
ತಪ್ಪಿಸುವ ಬಾಯಿ ಮಾತು
ಅತ್ತ ಹೋದರಾರೋ ಇತ್ತ ಬಂದರಾರೋ
ಉತ್ತರವೇ ಇರದ ಕವಿಯ ಪ್ರಶ್ನೆ
ಮುಗಿದ ನಾಟಕವ ಮತ್ತೊಮ್ಮೆ ಆಡಿಸಲು
ಇದೇನು ರಂಗಸ್ಥಲವೇ
ಹಾಡು ಬರೆದು ಆಟ ಕಟ್ಟಿ ಕುಣಿಯಲು
ನಾಟಕವೇ ..ಜೀವನ?..
ಇಲ್ಲಿ ಕಳೆವುದೆಲ್ಲ ಕಳೆವುದೆ
ಉಳಿವುದಷ್ಟೇ ಮಿಕ್ಕಿದ್ದು..ದಕ್ಕಿದ್ದು
ಡಾ.ವೈ.ಎಂ.ಯಾಕೊಳ್ಳಿ
ಪ್ರಾಚಾರ್ಯರು
ಸರಕಾರಿ ಪದವಿ ಪೂರ್ವ ಕಾಲೇಜು ಯಕ್ಕುಂಡಿ
ತಾ ಸವದತ್ತಿ ಜಿ ಬೆಳಗಾವಿ
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…