ಕವಿತೆಗಳು

ಗೀತಾ ಜಿ ಹೆಗಡೆ ಕಲ್ಮನೆ ಅವರು ಬರೆದ ಕವಿತೆ ‘ಗೊತ್ತಿಲ್ಲದಂತೆ ಇದ್ದುಬಿಡಬೇಕು’

ಮೀಟರ್ ತಿರುಗಿಸುತ್ತ
ಆಟೋದವನು ಕೇಳುತ್ತಾನೆ
ಯಾವ ಕಡೆಗೆ ಹೋಗಬೇಕು ಹೇಳಿ
ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ
ಕಿಕ್ ಹೊಡೆದು ಓಡಿಸುತ್ತಾನೆ
ಗ್ರಾಹಕರನ್ನು ಗಮನಿಸುತ್ತ.

ಓಟಿಪಿ ಪಡೆದ
ವೋಲ್ವೊ ಆಟೋದವನು
ಹತ್ತಿ ಕೂತಿದ್ದೇ ತಡ
ಕಿಕ್ ಹೊಡೆದು ಚಾಲನೆ ಕೊಡುತ್ತಾನೆ
ಗೂಗಲ್ ಮ್ಯಾಪ್ ಹಾಕಿಕೊಂಡು
ಇಲ್ಲೂ ಕನ್ನಡಿಯಲ್ಲಿ
ಗ್ರಾಹಕರನ್ನು ಗಮನಿಸುತ್ತ.

ಕೂತವನ ಗಮನ ಪೂರಾ
ಮೊಬೈಲಿನಲ್ಲಿ
ಖಾತ್ರಿ ಪಡಿಸಿಕೊಂಡವನು
ಆನೆ ಸಾಗಿದ್ದೇ ದಾರಿ
ಬರ್ರನೆ ಓಡಿಸುತ್ತಾನೆ
ಮಾರ್ಗದ ದಿಕ್ಕು ಬದಲಿಸಿ.

ಗಮನಕ್ಕೆ ಬಂದು ಕೇಳಿದರೆ
ಇನ್ನೇನು ಇಲ್ಲೇ ಇಲ್ಲೇ
ಪಕ್ಕಕ್ಕೆ ತಿರುಗಿದರೆ
ಪಾಯಿಂಟ್ ಬಂದೇ ಬಿಟ್ಟಿತು
ಹಾಗೆಯೇ ಹೇಳುತ್ತಾನೆ,
ಯಾಕೋ ಸಿಗ್ತಾ ಇಲ್ಲ ಗೂಗಲ್ ಪಾಯಿಂಟ್
ಬಿಟ್ಟಾ ನೋಡಿ ನಿಜವೆಂಬಂತೆ
ಹಸಿ ಹಸಿ ಸುಳ್ಳು.

ನಂಬಿದ ಗ್ರಾಹಕ
ಕುತ್ತಿಗೆ ಉದ್ದ ಮಾಡಿ ಮಾಡಿ
ಕೊನೆಗೆ ತಾನೂ
ಗೂಗಲ್ ಸರ್ಚಿನಲ್ಲಿ ತೊಡಗಿದರೆ
ಓರೆಗಣ್ಣಿನಿಂದ ಸೈಡ್ ಮಿರರ್
ನೋಡಿ ಅಂದ
ತಗಳಿ ಬಂದೇ ಬಿಟ್ಟಿತು
ನೀವು ಇಳಿಯುವ ತಾಣ
ನಾನು ಆಗಲೇ ಹೇಳಲಿಲ್ವಾ?

ಮಾತಿಗೆ ಆಸ್ಪದ ಕೊಡದ ಚತುರ
ಆಗೇ ಮೂಡ್ , ಪೀಚೇ ಮೂಡ್,
ಬಾಯೇ ಮೂಡ್, ದೈನೇ ಮೂಡ್
ಅಂತೂ ಸುತ್ತಾಕಿ ಸುತ್ತಾಕಿ
ಮೀಟರ್ ಓಡಿಸಿದ
ಸಮಾಧಾನ ಅವನಿಗೆ.

ಏನಾದರೂ ಆಗಲಿ
ಅರ್ಜೆಂಟ್ ಇರುವ ನಾವುಗಳು
ಸಧ್ಯ ಸ್ಥಳ ತಲುಪಿದ ಸಮಾಧಾನಕ್ಕೆ
ಕಮಕ್ ಕಿಮಕ್ ಎನ್ನದೆ
ಮೀಟರ್ ಬಾಬ್ತು ತೆತ್ತು
ಹಲ್ಕಿರಿಯುತ್ತ ಅವನಿಗೆ
ಥ್ಯಾಂಕ್ಯೂ ಹೇಳುತ್ತೇವೆ.

ಹಾಗೆ ಚಿಲ್ಲರೆ ಇಟ್ಕೊಪ್ಪಾ ಎಂದು
ಕೆಲವರು ಹೇಳುವಾಗ
ದೇಶಾವರಿ ನಗು ಬೀರುವ ಅವನಿಗೆ
ಒಳಗೊಳಗೇ ಖುಷಿ
ತಾನೇ ಬುದ್ಧಿವಂತನೆಂಬ ಹೆಮ್ಮೆ.

ನಿತ್ಯ ಜಂಜಾಟದ ಬದುಕಿಗೆ
ಮಣ ಭಾರ ಹೊತ್ತ ಮನಸ್ಸು
ಗೊತ್ತಾದ ವಿಷಯ
ಗೊತ್ತಿಲ್ಲದಂತೆ ಇದ್ದುಬಿಡುತ್ತದೆ
ಬದಲಾದ ಸಮಾಜಕ್ಕೆ
ಬದ್ಧತೆಯ ಕಟ್ಟುಪಾಡಿಗೆ ಬಲಿಯಾಗಿ.

ಒಂದಾ …
ಕಾದಾಡಬೇಕು
ಅವರ ಮಟ್ಟಕ್ಕೆ ಇಳಿದು
ನಡುಬೀದಿಯ ನಾರಾಯಣನಾಗಿ
ರಸ್ತೆ, ನೆರೆಕರೆಯವರ ಮರೆತು
ಇಲ್ಲಾ…
ಹೋದರೆ ಹೋಗಲೆಂದು
ಇದ್ದುಬಿಡಬೇಕು ನಮ್ಮ ಪಾಡಿಗೆ ನಾವು
ದೂಸರಾ ಮಾತನಾಡದೆ
ಏನೂ ಆಗೇ ಇಲ್ಲವೆಂಬಂತೆ.

ಆಯ್ಕೆ ನಮ್ಮದೇ
ಏನಂತೀರಾ?

SHANKAR G

Share
Published by
SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago