ಯಾರನ್ನಾದರು ಪ್ರೀತಿಸದಿದ್ದರೆ.
ವಿರಹ ವೇದನೆಯಲ್ಲಿ ಬೇಯದಿದ್ದರೆ.
ಮೋಹ, ಕಾಮಗಳಲ್ಲಿ ತೊಳಲದಿದ್ದರೆ
ಕವಿತೆ ಹುಟ್ಟುವುದಿಲ್ಲ.
ರೂಢಿಗತ ಹಾದಿಬಿಟ್ಟು
ಹೊಸಹಾದಿ ಹುಡುಕದಿದ್ದರೆ.
ನಿರ್ಲಿಪ್ತತೆಯಿಂದ ಜಾರಿ
ಏರಿಳಿತಗಳಲ್ಲಿ ಹಾರದಿದ್ದರೆ
ಕವಿತೆ ಹುಟ್ಟುವುದಿಲ್ಲ
ವೇದಿಕೆಯ ಮುಂದಣ ರಸಗಳಿಗೆಯಲ್ಲಿ
ಪರದೆ ಹಿಂದಿನ ಬಿಕ್ಕ ಅರಿಯದಿದ್ದರೆ
ಮಾತಿನ ಗದ್ದಲದಲ್ಲಿ
ಮೌನದ ಕೂಗ ತಿಳಿಯದಿದ್ದರೆ
ಕವಿತೆ ಹುಟ್ಟುವುದಿಲ್ಲ.
ಹೂವಿನ ಪರಿಮಳ ಸವಿಯುವಾಗ
ಗೊಬ್ಬರದ ವಾಸನೆಗೆ ಮೂಗ ಮೀಸಲಿಡದಿದ್ದರೆ
ನಾಡೆಲ್ಲ ನಡಬಗ್ಗಿಸಿ ಪರಾಕುಪಂಪನೊತ್ತುವಾಗ
ಚೂರಾದರು ತಲೆ ಎತ್ತದಿದ್ದರೆ
ಕವಿತೆ ಹುಟ್ಟುವುದಿಲ್ಲ
ತಪ್ಪೋಳಗಿನ ಸರಿಯ
ಸರಿಯೋಳಗಿನ ತಪ್ಪ
ಕಾಣ್ವ ಕಣ್ಣ ಹೊಂದದಿದ್ದರೆ
ರೇಗನ್ನು ರಾಗವಾಗಿಸುವ
ಅಂಟಿದ ಕಲೆಗಳನ್ನೆ ಕಲೆಯಾಗಿಸುವ
ಕಸುಬು ಬಾರದಿದ್ದರೆ
ಕವಿತೆ ಹುಟ್ಟುವುದಿಲ್ಲ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
Super