ಮಾತಿನ ಮನೆ ಕಟ್ಟದೇ
ಕಿರುಬೆರಳ ಸೋಕಿಸದೇ
ಅರಿಯದಂತೆ ಎದುರಿಗೆ ಕುಳಿತುಬಿಡು
ನಿನ್ನಲ್ಲೇ ಮಾತನಾಡುವೇ ಮೌನವಾಗಿ..
ದುಷ್ಯಂತನಿಗಾಗಿ ಶಕುಂತಲೆಯು
ಮನದ ಚಿತ್ತವನ್ನಲ್ಲಿಟ್ಟಂತೆ
ಎನ್ನ ಮನವೆಲ್ಲ ನಿನ್ನಲ್ಲಿರುವಾಗ
ಕೇಳದೇ ಸುಳಿದುಬಿಡು ಎದುರಾಗಿ..
ನೀನೇನೂ ರಾಜಕುಮಾರನಾಗಬೇಕಿಲ್ಲ
ಕುದುರೆಯನೇರಿ ಬರಬೇಕಾಗಿಲ್ಲ
ಅಂತಸ್ತಿನ ಹಂಬಲವೆಲ್ಲಿದೇ ಪ್ರೀತಿಯಲ್ಲಿ
ಕರೆಯದೇ ಬಂದುಬಿಡು ಮೆಲುವಾಗಿ…
ಕಾಣಿಕೆಯಿಂದ ಮೆಚ್ಚಿಸಬೇಕಿಲ್ಲ
ಹೊಗಳಿಕೆಯ ಮಾಲೆ ಮುಡಿಸಬೇಕಿಲ್ಲ
ತಿಳಿಯದಂತೆ ಆವರಿಸುತ್ತಿರು
ಗಿಡಕ್ಕೆ ಬಳ್ಳಿಯಂತಾಗಿ….
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…