ಸ್ವಾಮ್ಯಾರಾsss ಊಟಮಾಡಿ
ಮೂರು ದಿನಾತು
ಬೇಡಿ ಕಾಡಿದೆ
ಅವರಿವರ
ಒಂದು ತುತ್ತು ಅನ್ನ
ಸಿಗದಾತು…
ಏನಾದರು ಕೊಡಿ ?
ಬಡಪಾಯಿಯ ಹೊಟ್ಟೆಗೆ.
ಎದುರು ಬೀದಿಯ ಶ್ರೀಮಂತರ
ಕೇಳಿದೆ
ಅಳಿಸಿದ ಅನ್ನ ಎಸೆದರು
ತಿನ್ನುವಾ…ಅಂತಾ
ಕೈ ಬಾಯಿಗೆ ಹೋಗುತ್ತಲೆ ಬೀದಿ ಶ್ವಾನ ಬಂದು
ಬಾಯಾಕಿತು
ತುತ್ತು ಅನ್ನ ಮಣ್ಣ ಪಾಲು
ಮತ್ತೊಂದ ಅಗಳು ನಾಯಿ ಪಾಲು
ಏನಾದರು ಕೊಡಿ
ಹಸಿದ ಜೀವಕೆ.
ಹಸಿದ ಕಂದಮ್ಮಗಳು
ಗುಡಿಸಲಲ್ಲಿ ಚಿರುಗುಟ್ಟುತ್ತಿವೆ
ರೋಗದಲಿ ನರಳುವ ಪತ್ನಿ
ರೋಧಿಸುತ್ತಿದ್ದಾಳೆ
ಸ್ವಾಮ್ಯಾರssss
ನಿಮ್ಮ ದಮ್ಮಯ್ಯಾ ಅಂತಿನಿ
ಏನಾದರು ಕೊಡಿ ? ಹಸಿದ ಹೊಟ್ಟೆಯ
ಭಾರ ನಿಗಿಸಿ.
ದುಡಿಯೊಣವೆಂದರೆ
ರಟ್ಟೆಯಲಿ ಕಸುವಿಲ್ಲ.,
ಸಾಯೋಣವೆಂದರೆ,
ಈ ಪಾಪಿಗೆ ಬರದಾಗಿದೆ ಮರಣ.
ಹುಟ್ಟಿ ಕೆಟ್ಟೆನೋ…
ಬದುಕ ಮೂರಾಬಟ್ಟೆ.
ಮನೆಬಿಟ್ಟು ಮೂರು ದಿನವಾತು
ಹಸಿದ ಹೊಟ್ಟೆಗೆ ಏನಾದರು ಕೊಡಿ ಸ್ವಾಮ್ಯಾರಾssss
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಚನ್ನಾಗಿದೆ ಸರ್, ಮುಂದೆ ಬರೆಯಬಹುದಾಗಿತ್ತು.
ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು
ಕವಿತೆ ಅಪೂರ್ಣ
ಚೆನ್ನಾಗಿದೆ ಸರ್ 👌
👌