ಸ್ವಾಮ್ಯಾರಾsss ಊಟಮಾಡಿ
ಮೂರು ದಿನಾತು
ಬೇಡಿ ಕಾಡಿದೆ
ಅವರಿವರ
ಒಂದು ತುತ್ತು ಅನ್ನ
ಸಿಗದಾತು…
ಏನಾದರು ಕೊಡಿ ?
ಬಡಪಾಯಿಯ ಹೊಟ್ಟೆಗೆ.
ಎದುರು ಬೀದಿಯ ಶ್ರೀಮಂತರ
ಕೇಳಿದೆ
ಅಳಿಸಿದ ಅನ್ನ ಎಸೆದರು
ತಿನ್ನುವಾ…ಅಂತಾ
ಕೈ ಬಾಯಿಗೆ ಹೋಗುತ್ತಲೆ ಬೀದಿ ಶ್ವಾನ ಬಂದು
ಬಾಯಾಕಿತು
ತುತ್ತು ಅನ್ನ ಮಣ್ಣ ಪಾಲು
ಮತ್ತೊಂದ ಅಗಳು ನಾಯಿ ಪಾಲು
ಏನಾದರು ಕೊಡಿ
ಹಸಿದ ಜೀವಕೆ.
ಹಸಿದ ಕಂದಮ್ಮಗಳು
ಗುಡಿಸಲಲ್ಲಿ ಚಿರುಗುಟ್ಟುತ್ತಿವೆ
ರೋಗದಲಿ ನರಳುವ ಪತ್ನಿ
ರೋಧಿಸುತ್ತಿದ್ದಾಳೆ
ಸ್ವಾಮ್ಯಾರssss
ನಿಮ್ಮ ದಮ್ಮಯ್ಯಾ ಅಂತಿನಿ
ಏನಾದರು ಕೊಡಿ ? ಹಸಿದ ಹೊಟ್ಟೆಯ
ಭಾರ ನಿಗಿಸಿ.
ದುಡಿಯೊಣವೆಂದರೆ
ರಟ್ಟೆಯಲಿ ಕಸುವಿಲ್ಲ.,
ಸಾಯೋಣವೆಂದರೆ,
ಈ ಪಾಪಿಗೆ ಬರದಾಗಿದೆ ಮರಣ.
ಹುಟ್ಟಿ ಕೆಟ್ಟೆನೋ…
ಬದುಕ ಮೂರಾಬಟ್ಟೆ.
ಮನೆಬಿಟ್ಟು ಮೂರು ದಿನವಾತು
ಹಸಿದ ಹೊಟ್ಟೆಗೆ ಏನಾದರು ಕೊಡಿ ಸ್ವಾಮ್ಯಾರಾssss
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಚನ್ನಾಗಿದೆ ಸರ್, ಮುಂದೆ ಬರೆಯಬಹುದಾಗಿತ್ತು.
ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು
ಕವಿತೆ ಅಪೂರ್ಣ
ಚೆನ್ನಾಗಿದೆ ಸರ್ 👌
👌