ಅರೆ ಕ್ಷಣ ಇವಳ ಮೇಲೆ
ಕುಳಿತರೂ ಸಾಕು ಅರಿವೆ ತುಂಬ
ಅರಳುವ ಚಿತ್ತಾರ
ಮೊದಲ ಪ್ರೇಮಿ ಎದೆಯಲ್ಲಿ
ಕೊರೆದಿಟ್ಟು ಹೋದ ಗಾಯದ ಹಾಗೆ
ಎಷ್ಟು ಝಾಡಿಸಿದರೂ ಅದೆಲ್ಲೋ
ಚೂರು ಉಳಿಯುವ ಕಲೆ
ಒಂದು ಹನಿ ಜೀವ ಜಲ
ಸೋಕಿದರೂ ಸಾಕು
ಒಡಲ ತುಂಬ ಮೊಳಕೆ
ಮೊದಲ ಸ್ರಾವಕೇ ಪುಟ್ಟಿದೆದ್ದ
ಅಣುಗಳ ಸಂಯೋಗ ಸಾಫಲ್ಯ
ಬೆಳೆದೇ ಬೆಳೆಯುವ ನಿಶ್ಚಯ
ಒಂದು ಬೆರಳಲಿ ಮುಟ್ಟಿದರೂ ಸಾಕು
ಮೆತ್ತಿಕೊಂಡೇಬಿಡುವ ಅಂಟು
ಸಂಜೆಯ ಸಂದಿಯಲ್ಲಿ ಬರಸೆಳೆದು
ತನ್ನವನಾಗಿಸಿಕೊಂಡ ಪ್ರೇಮಿಯ
ಹಠ
ಒಂದೇ ಬಾರಿ ಮೈಮರೆತರೂ ಸಾಕು
ಆಕಾಶಮುಖಿ ಮೂಗ ಕೆಳಗೆ
ಬೀಳಿಸಿ ಮಾಡಿಕೊಳುವಾಗ ತನ್ನ ಪಾಲು
ಅಂದುಕೊಳ್ಳುತ್ತೇನೆ,
ಅಬ್ಬಾ!
ಅವಳ ಸೊಕ್ಕಿಗೆ ಸಾಟಿಯಿಲ್ಲ
ಈ ಸಾತ್ವಿಕ ಗರ್ವವ ನೀವು ದೂರುವ
ಹಾಗೂ ಇಲ್ಲ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…