ಕವಿತೆಗಳು

ಶ್ವೇತಾ ಎಂ ಯು ಮಂಡ್ಯ ಅವರು ಬರೆದ ಕವಿತೆ ‘ದ್ವೇಷ’

ದ್ವೇಷವಿಲ್ಲ ಸುಡಲು
ಬೆಂಕಿ ಮಾತ್ರ ಇದೆ
ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ
ಪ್ರಾಣವಾಯು ಹೊರತು
ಮತ್ತೇನು ಉಳಿದಿಲ್ಲ

ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ ಕೊಂಡರೆ ನಗಬೇಕು ಎನಿಸುತ್ತದೆ
ರಂಜಕ ಹಾಕಿ ಸುಡುವ ಮನಸ್ಸಾದರೂ ಸುಮ್ಮನಾಗುತ್ತೇನೆ
ಕಣ್ಣುಗಳು ನೋಡಿಕೊಳ್ಳಲಿ
ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ

ಬಾಯಾರಿದರೆ ಕುಡಿಯಬೇಕು ನೀರು,
ದಕ್ಕದ ನೀರ ಕೊಳಕೆಂದರೆ ಹೇಗೆ?
ಇಲ್ಲದಿರಬಹುದು ನಾಲಿಗೆಗೆ ಏಲುಬು ಹೃದಯಕ್ಕೆ ದಾರಿಗಳಿವೆ
ಸಂಯಮವೇ ಸಂಬಂಧ
ಗುಣಗಳೇ ಬೇಕು
ನಗುವಿಗೆ ಹಲವು ಮುಖ
ಬದಲಿ ಇಲ್ಲ ಜೀವಕ್ಕೆ

ಕತ್ತರಿಸಿದರೆ ಕರುಳ ಬಳ್ಳಿ,
ಬಳ್ಳಿಯೊಳಗಣ ಬಳ್ಳಿ
ನಿನ್ನ ಹೂ ಬಳ್ಳಿ
ನಿನ್ನ ಹಾಗೆ ನಾನು
ಎಲ್ಲರೊಳಗೊಂದು ಜೀವ
ಅದಕ್ಕೆ ಹೆಸರು ಬೇರೆ ಬೇರೆ
ಒಂದೇ ಅರ್ಥ ಅದು ಹೆಣ್ಣು

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago