ಕವಿತೆಗಳು

ಚಿದಾನಂದ ಶಿ ಮಾಯಾಚಾರಿ ಅವರು ಬರೆದ ಕವಿತೆ ‘ದೇವರ ಚಿತ್ರ’

ಗೋಡೆಯ ಮೇಲಿನ ದೇವರ ಚಿತ್ರ
ನಗುತಿದೆ ಎಂದಿನ ಹಾಗೇ ಇಂದು
ನಕ್ಕರೂ ನಗುವದು ಅತ್ತರೂ ನಗುವದು
ಅರಿಯೆನು ಏತಕೆ ಹೀಗಿದೆ ನಿರ್ಭಾವ

ನೋಡಿದ ಕೂಡಲೆ ಒಳಗಿನ ಮನವಿದು
ಬೇಡುತ ಇರುವದು ನೂರೊಂದು
ಕೊಟ್ಟರು ಬಿಟ್ಟರೂ ಕಡಿಮೆ ಆಗದು
ಕೇಳುವ ವ್ಯಾಧಿಯು ಎಂದೆಂದೂ

ತೃಪ್ತಿಯ ಭಾವದಿ ಮರತೆ ಬಿಡುವದು
ಗೋಡೆಯ ಮೇಲೆ ಪಟವೊಂದಿದೆ ಎಂದು
ದುಃಖವು ಮೂಡಲು ಹೇಳದೆ ಕಣ್ಣಿದು
ಅತ್ತಲೇ ನೋಡಲು ಕಲಿತಿದೆ ಏಕೆಂದು

ಎಷ್ಟೊಂದಿವೆ ಹಾಗೆ ಉಳಿದಿಹ ಪ್ರಶ್ನೆಗಳು
ಉತ್ತರ ಸಿಗದೆ ಆಲದಮರದ ಬಿಳಲಂತೆ
ಅಪ್ಪನು ಅಮ್ಮನು ನಂಬಿದ ಗುರುಗಳು,
ಕೊಟ್ಟಿಹ ಉತ್ತರ ಸುಳ್ಳಿನ ಸುಳಿಯಂತೆ !
ನಂಬಿಕೆ ಕರಗದು ಹಾಗೆ ಉಳಿಯದು
ಕರಗುವ ಮೊದಲು ಏನೋ ನಡೆವುದು
ಯತ್ನವು ನಾನೋ ಕಾರಣ ನೀನೊ
ಹೇಳದೇ ಪಟದಲಿ ದೇವ ನಗುತಿಹನೋ

SHANKAR G

View Comments

  • ಸೊಗದಾಗಿದೆ.
    ಗೊಡೆಗಂಟಿದೆ ನಂಬಿಕೆಯ ನಂಟು
    ನಕ್ಕಾಗ ಸೊತಾಗ ಬರವಸೆ ಅಲ್ಲುಂಟು
    ಕವನದೊಳಗಿನ ಪ್ರತಿ ಪದವೂ ಅರ್ಥಪೂರ್ಣ.

  • ಚೆನ್ನಾಗಿದೆ!

    ಗೋಡೆಯ ಪಟ
    ಅದರಲ್ಲಿದೆ ನಂಬಿಕೆ ದಿಟ
    ದೇವರು ಒಳಗಿದ್ದರೂ
    ಹೊರ ಹುಡುಕುವ ತಹ ತಹ
    ನೂರು ಪ್ರಶ್ನೆ
    ಎದೆಯ ಗೂಡೊಳಗೆ
    ನಗುವನಲ್ಲ‌ ಎಂಬ ಅನಿಸಿಕೆ

Share
Published by
SHANKAR G

Recent Posts

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

55 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago