ಕಡಲ ತೀರದ ತಂಪಾದ ಗಾಳಿ
ಮನದಲಿ ತೂಗುತಿದೆ ಪ್ರೀತಿಯ ಜೋಕಾಲಿ
ಸಂಜೆಯ ರಂಗು ತಂದಿದೆ ನಿನ್ನಯ ನೆನಪು
ಕಾಡಿದೆ ಬಿಡದೆ ಮನವ ನಿನ್ನಯ ರೂಪ ಒನಪು
ಭಾಸ್ಕರನು ಕಡಲಲಿ ಲೀನವಾಗುವ ಸಮಯದಿ
ನಿರಾಳವಾಗುವುದು ಮನವು ಭಾವಪರವಶದಿ
ನೀಲ್ಗಡಲ ಮೇಲೆ ಬರುವನು ಕಡುಗಂಪು ನೇಸರನು
ಕಡಲಿಗೆ ಸ್ವರ್ಣದ ಹೊಂಗಿರಣವ ಸೂಸುವನು
ಅಲೆಗಳ ಏರಿಳಿತದ ಸಪ್ಪಳ
ಮರೆಸುವುದು ಮನಸ್ಸಿನ ತಳಮಳ
ಇಳಿ ಸಂಜೆಯ ಹೊತ್ತಲಿ ಮರುಕಳಿಸುವುದು ನೆನಪುಗಳು
ಮನದಲ್ಲಿ ಅಚ್ಚಳಿದಿದೆ ಜೊತೆಯಾಗಿ ನಡೆದ ಹೆಜ್ಜೆ ಗುರುತುಗಳು
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…