ಆಗಸಕ್ಕೆ ಏಣಿ ಹಾಕಬೇಡ
ಆಗಾಗ ಕೇಳಿ ಬರುವ ಗೊಣಗಾಟ
ಕಿವಿಗೊಡುವವಳಲ್ಲ ಅವಳು
ಕನಸುಗಳಿಗೆಲ್ಲಿಯ ನಿರ್ಬಂಧ…!!
ತನ್ನದೇ ಭಾವಪ್ರಪಂಚದಲ್ಲಿ ತಾನೇ
ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ??
ಕತ್ತಲಿನ ಇತಿಹಾಸದ ಕರಾಳತೆಗೆ
ಕಂಗೆಡುವವಳಲ್ಲ ಅವಳು
ಮನದ ಆಗಸದ ತುಂಬಾ ಸದಾ
ಮಿನುಗುವವು ಆಕಾಂಕ್ಷೆಯ ನಕ್ಷತ್ರಗಳು
ಪ್ರತಿ ಉದಯಕ್ಕೊಂದು ಅರ್ಥವಿದೆ
ಅವಳಂತರಂಗದ ದನಿಯಲ್ಲಿ…
ದೂಷಿಸುವವರಿಗೆ ಮಣಿದು
ದಾಸಿಯಾಗುವವಳಲ್ಲ
ಹೊಗಳಿಕೆಗೆ ಹಿಗ್ಗಿ ಮೈಮರೆಯುವವಳಲ್ಲ
ವಾಸ್ತವದ ಒರೆಗಲ್ಲಿಗೆ ತನ್ನನ್ನು
ತಾನೇ ತೀಡಿ ಪ್ರಕಾಶಿಸುವವಳು
ನಿತ್ಯ ನೂತನ ನಿರಂತರ ವಾಹಿನಿಯಂತೆ
ಗುಪ್ತಗಾಮಿನಿಯ ಚೆಲುವ ಹೊತ್ತವಳು
ಅಂತ್ಯವಿಲ್ಲದ ಆಗಸವ ಬೊಗಸೆಯಲ್ಲಿ
ಬಯಸುವ ಭೂಮಿ ಇವಳು
ನಯನದಲ್ಲಿ ನಗುವಿನೊರತೆಯ
ಬತ್ತದಂತೆ ತುಳುಕಿಸುವವಳು
ಕಂಬನಿಯ ಎದೆಯೊಳಗೆ ಬಸಿದು
ಕನಸಿನ ನೆಲದಲ್ಲಿ ಹೂವಾಗಿ
ಘಮಘಮಿಸುವವಳು…!!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಭವ್ಯಾಜೀ ,ತೂಕದ ಕವಿತೆ,ಕನ್ನಡಿಗರ ಭಾವಲೋಕ ಆವರಿಸುವ ಭರವಸೆ ಹೇಳುತಿದೆ