ಕವಿತೆಗಳು

ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಆಗಸ ಮತ್ತು ಅವಳು’

ಆಗಸಕ್ಕೆ ಏಣಿ ಹಾಕಬೇಡ
ಆಗಾಗ ಕೇಳಿ ಬರುವ ಗೊಣಗಾಟ
ಕಿವಿಗೊಡುವವಳಲ್ಲ ಅವಳು
ಕನಸುಗಳಿಗೆಲ್ಲಿಯ ನಿರ್ಬಂಧ…!!
ತನ್ನದೇ ಭಾವಪ್ರಪಂಚದಲ್ಲಿ ತಾನೇ
ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ??
ಕತ್ತಲಿನ ಇತಿಹಾಸದ ಕರಾಳತೆಗೆ
ಕಂಗೆಡುವವಳಲ್ಲ ಅವಳು
ಮನದ ಆಗಸದ ತುಂಬಾ ಸದಾ
ಮಿನುಗುವವು ಆಕಾಂಕ್ಷೆಯ ನಕ್ಷತ್ರಗಳು
ಪ್ರತಿ ಉದಯಕ್ಕೊಂದು ಅರ್ಥವಿದೆ
ಅವಳಂತರಂಗದ ದನಿಯಲ್ಲಿ…
ದೂಷಿಸುವವರಿಗೆ ಮಣಿದು
ದಾಸಿಯಾಗುವವಳಲ್ಲ
ಹೊಗಳಿಕೆಗೆ ಹಿಗ್ಗಿ ಮೈಮರೆಯುವವಳಲ್ಲ
ವಾಸ್ತವದ ಒರೆಗಲ್ಲಿಗೆ ತನ್ನನ್ನು
ತಾನೇ ತೀಡಿ ಪ್ರಕಾಶಿಸುವವಳು
ನಿತ್ಯ ನೂತನ ನಿರಂತರ ವಾಹಿನಿಯಂತೆ
ಗುಪ್ತಗಾಮಿನಿಯ ಚೆಲುವ ಹೊತ್ತವಳು
ಅಂತ್ಯವಿಲ್ಲದ ಆಗಸವ ಬೊಗಸೆಯಲ್ಲಿ
ಬಯಸುವ ಭೂಮಿ ಇವಳು
ನಯನದಲ್ಲಿ ನಗುವಿನೊರತೆಯ
ಬತ್ತದಂತೆ ತುಳುಕಿಸುವವಳು
ಕಂಬನಿಯ ಎದೆಯೊಳಗೆ ಬಸಿದು
ಕನಸಿನ ನೆಲದಲ್ಲಿ ಹೂವಾಗಿ
ಘಮಘಮಿಸುವವಳು…!!

SHANKAR G

View Comments

  • ಭವ್ಯಾಜೀ ,ತೂಕದ ಕವಿತೆ,ಕನ್ನಡಿಗರ ಭಾವಲೋಕ ಆವರಿಸುವ ಭರವಸೆ ಹೇಳುತಿದೆ

Share
Published by
SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago