ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಸದ್ದಡಗಿಸಿದ ಈ ಉಸಿರು ಹಾಗೆ ಇದೆ
ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ
ಹುಟ್ಟು ಸಾವಿನ ನೆರಳಲ್ಲಿ
ಗುದುಮುರುಗಿ ಗೀತ ಸಾಗುತ್ತಿದೆ
ಯಾವುದೇ ಅಡೆತಡೆಯಿಲ್ಲದೇ
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಬಟ್ಟೆಗಳೆಲ್ಲ ಶಾಪದ ಮೂಟೆ ಹೊತ್ತಿವೆ
ಪಾದಗಳೊ ಬಿರುಕುಗಳ ಕಾಳಗದಲ್ಲಿ ನರಳುತ್ತಿವೆ
ಕಾಲ್ಮರಿಯ ಚೀಮಾರಿಗೊ
ಬೂಟಿನೇಟಿಗೊ
ಒಂಟೆಸಳ ಬಳ್ಳೊಳ್ಳಿ ಬಿಕ್ಕುತ್ತಿದೆ
ಸಂತೆ ಸಂತೆಗೊ ಅದೆಷ್ಟು ಅಂತರ
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ನಿರಾಳ ಮೂಖಗಳ ಹಸಿವು ನೀಗಲೆಂದು
ತಾಪತ್ರಯದ ಚಂದಿರನನ್ನು ಹೂತು
ಮಣ್ಣ ಮೌನವ ಧರಿಸಿದ ಕೆರೆಯ ಒಡಲ ಕರೆಗೆ ಓಗೊಟ್ಟು
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಯಾವ ಹಾದಿಯ ಸುಣ್ಣ ಬಣ್ಣ ಅಪ್ಪಿಕೊಳ್ಳುವುದೆಂದು
ಕಾತರದ ನೀಲಗಿರಿಯ ಕೊರಳು ಚಾಚುವುದೆಂದು
ಮಟ ಮಟ ಮಧ್ಯಾಹ್ನದ ನೆತ್ತಿ ಅರಳುವುದೆಂದು
ಮಾತಿಲ್ಲದೆ ಎದೆಗುಂಟ ಹಬ್ಬಿರೊ ಗೋರಿಗಳ ಹೂವಿನ ನಿರಾಳತೆಗೆ ಶರಣಾಗಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…