ಕವಿತೆಗಳು

ಆಶಾ ಎ. ಶಿವಮೊಗ್ಗ ಅವರು ಬರೆದ ಕವಿತೆ ‘ಕ್ಷಮಿಸಿ ಬಿಡೇ ಅಮ್ಮ’

ನನ್ನಮ್ಮನಿಗೆ
ಅದೆಂಥದ್ದೂ…ಮರಳು
ನಾ ಅವಳ
ಬದುಕ ಬರಹವಾಗಿಸಬೇಕಂತೆ…
ಬಯಲಾದ ಪದಗಳಲಿ
ಅವಳು ಕುಣಿಯುತ್ತಾಳಂತೆ..

ಅವಳೆದುರಿಗೆ ನನ್ನದೊಂದೇ
ಪ್ರಶ್ನೆ..
ಅಕ್ಷರಗಳಿಗೆ ನಿಲುಕದಂತೆ
ಜೀವಿಸಿದ ನಿನ್ನ
ಅದ್ಯೇಗೆ ಬಂಧಿಸಲಿ..
ನೀ ತೊಡದ ಒಡವೆಯಲಿ
ಅದ್ಯೇಗೆ ನಿನ್ನ ಸಿಂಗರಿಸಲಿ..

ಏ ಅಮ್ಮಾ
ಅನಕ್ಷರಸ್ಥಳು…ನಾನು
ನಿನ್ನ ಅನಂತ
ಬದುಕಿನೆದುರಿಗೆ
ವರ್ಣಮಾಲೆಗಳೇ ಇಲ್ಲ
ಅಲ್ಲಿ ಪದವಿಲ್ಲಾ
ಕ್ಷಯವಾಗುವ ಅಕ್ಷರಗಳಿಲ್ಲಾ..

ಏ ಅಮ್ಮಾ
ಕತ್ತಲನ್ನೆ ಹಗಲಾಗಿಸಿ
ಕಾಯವನ್ನೆ ದೀವಿಗೆಯಾಗಿಸಿ
ಪೊರೆದವಳ..
ಬಾಳ…ಚಿತ್ರವ
ರಚಿಸಲಾದೀತೇ…
ಗಡಿಗಳೇ ಇಲ್ಲದ
ಈ ರೇಖಾ ಚಿತ್ರವ..
ಚಿತ್ರಿಸಲಾದೀತೆ..,

ಕ್ಷಮಿಸಿ ಬಿಡೇ ಅಮ್ಮಾ
ನಿನ್ನ ಕೂಸಿಗೆ
ಮಡಿಲ ಮರೆಯಲಿ
ಮಿಯ್ಯುವುದು ತಿಳಿದಷ್ಟು
ಬಯಲಾಗುವ ಪರಿ ತಿಳಿದಿಲ್ಲ ಕಣೇ..

SHANKAR G

View Comments

  • Hey, just signed up on djbet33! The site looks slick, and the bonuses seem decent. Anyone else here been playing? What games do you recommend? Check it out yourself djbet33

  • g9777casino? Been eyeing this one for a while. The graphics look top-notch. Probably going to deposit this weekend Fingers crossed I win big g9777casino

  • Heard good things about 99mxcasino, and I wasn't disappointed! Wide range of games and a slick interface. You can find out more at: 99mxcasino

  • ಪ್ರಕಾಶ ಮದಕರಿ ಕೆ.ಚಿತ್ರದುರ್ಗ ಚಳ್ಳಕೆರೆ ತಾ. says:

    ನಿಸ್ವಾರ್ಥ ಕರುಣಾಮಯಿ ಅಮ್ಮನ ಕವಿತೆ ಬಹುಶ ಎಷ್ಟೇ ವರ್ಣಿಸಿದರು ವರ್ಣಿಸಲು ಪದಗಳು ಸಾಲದು ಆ ಜೀವಕ್ಕೆ.... Thanku.. 🌹🌹

  • ವ್ಹಾವ್ ಮನಕದಡಿದ ಸಾಲುಗಳು... ಅಮ್ಮನ ಕವಿತೆ ಯಾರೇ ಬರೆದರೂ,ಹೇಗೆ ಬರೆದರೂ ಚೆಂದ

  • ಚೆಂದದ ಕವಿತೆ... ಅಭಿನಂದನೆಗಳು ಆಶಾ ಅವರಿಗೆ

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago