ಕವಿತೆಗಳು

ಅಮ್ಮು ರತನ್ ಶೆಟ್ಟಿ ತೀರ್ಥಹಳ್ಳಿ ಅವರು ಬರೆದ ಕವಿತೆ ‘ಆಸರೆ’

ಮಳೆಯೇ ಆಸರೆ ಪೈರಿಗೆ
ಭುವಿಯ ಆಸರೆ ನದಿಗಳಿಗೆ
ಬಳ್ಳಿಯ ಆಸರೆ ಹಣ್ಣಿಗೆ
ಒಲವಿನ ಆಸರೆ ಹೆಣ್ಣಿಗೆ

ಸುತ್ತಲೂ ಕವಚದಂತೆ ಕಾಯಲು
ರಕ್ತ ಸಂಬಂಧಿಗಳ ಆಸರೆ
ಹುಟ್ಟಿನಿಂದ ಜೋಪಾನ ಮಾಡಲು
ಹೆತ್ತವಳ ಆಸರೆ
ಕುಡಿ ಮೀಸೆ ಚಿಗುರಿದ ಹದಿಹರೆಯಕೆ
ಗೆಳತಿಯ‌ ಆಸರೆ
ಪ್ರೀತಿಯಲಿ ಬಂಧಿಯಾದ ಹೃದಯಕೆ
ನೆನಪುಗಳೇ ಆಸರೆ

ಎಲ್ಲರ ನಡುವೆಯೂ ಕಾಡುವ ಒಂಟಿತನಕೆ
ಬೇಕಿದೆ ಸಂಗಾತಿಯ ಆಸರೆ
ಮದುವೆಯೆಂಬ ಬಂಧಕೆ ನಂಬಿಕೆಯೇ ಆಸರೆ
ಜೀವಗಳ ಬೆಸೆವ ಬಂಧಕೆ ಜನುಮಾಂತರದ ನಂಟಿನ ಆಸರೆ

ಅಪರಿಚಿತನಾಗಿ ಬಂದು
ಅಪರಿಮಿತ ಪ್ರೀತಿಗೆ ಸಾಕ್ಷಿಯಾದ ಸಂಗಾತಿಯೇ ಬದುಕಿಗೆ ಆಸರೆ
ನೋವುಗಳೆಷ್ಟೇ ಬರಲಿ
ಸಾಂತ್ವನವಾಗಿ ಸಾಗಬೇಕಿದೆ ಜೊತೆ ಜೊತೆಗೆಯೇ…

ಅಲ್ಪನಿಗೆ ಅಹಂಕಾರವೇ ಆಸರೆ
ಜ್ಞಾನಿಯ ಬುದ್ದಿಯವನ ಕೈಸೆರೆ .
ಎಂದೋ ನಶಿಸಿ ಹೋಗುವ ದೇಹದ ವ್ಯಾಮೋಹಕ್ಕೆ ಸಿಲುಕಿ,
ಓ ಮನುಜ ಮರೆತೆಯೇ ಮೇಲಿನವನೇ ಎಲ್ಲರಿಗೂ ಆಸರೆ
ಸಕಲ ಸೃಷ್ಟಿಯೂ ಭಗವಂತನ ನಾಟಕದ ಪಾತ್ರಧಾರಿಗಳೇ

SHANKAR G

Share
Published by
SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago