ಹರಿದ ಮಾಸಲು ಅಂಗಿ
ಮೊಣಕಾಲ್ಮೇಲಿನ ತುಂಡು ಚಡ್ಡಿ
ಹೆಗಲ ಮೇಲಿನ ಚೀಲದಿಂದ
ಇಣುಕುತ್ತಿದ್ದ ಹಳೆಯ ಪೇಪರ್,
ಪ್ಲಾಸ್ಟಿಕ್ಕಿನ ಬಾಟಲಿಗಳು.
ಹಗಲೆಲ್ಲಾ ಅಲೆದಲೆದು ತಂದದ್ದೆಲ್ಲಾ
ಸಂಜೆಗೆ ಗುಜರಿಯವನ ಹಿತ್ತಲಿಗೆ,
ಕೈಮೇಲೆ ಸಿಕ್ಕಿದ್ದು ಒಂದೆರಡೇ ಕಾಸು
ಹರಿದ ಬದುಕಿನ ಹೊಟ್ಟೆಗೆ,
ಕಂಡ ಕನಸಿನ ನನಸಿಗೆ.
ಅದೇ ಕಸದ ರಾಶಿಯ ಬದಿಯ
ಮರಕೆ ಬಿಗಿದ ಅವ್ವನ
ಹರಿದ ಸೀರೆಯ ಜೋಕಾಲಿಯ
ಜೀಕುವಾಗ…ಜೀವನವನ್ನೇ
ಜಯಿಸಿದ ಆನಂದ ಆ ಕಣ್ಗಳಲಿ.
ನಾಗರೀಕತೆಯ ನಾಟಕದ
ಈ ಮುಗ್ಧತೆಗೆ ಪಾತ್ರವಿಲ್ಲ…
ಅಕ್ಷರದ ರುಚಿ ಕಂಡಿಲ್ಲ…
ದೊರಕಿದ್ದು ಕೇವಲ ಅರೆಹೊಟ್ಟೆಯ ಗಂಜಿ
ಅರೆಬೆಳಕಿನ ಗುಡಿಸಲೊಳಗೆ…!!
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…