ಕವಿತೆಗಳು

ಶಾರದ ಎಸ್ ಬೆಳ್ಳಿ ಅವರು ಬರೆದ ಕವಿತೆ ‘ಅರೆ-ಬರೆ’

ಹರಿದ ಮಾಸಲು ಅಂಗಿ
ಮೊಣಕಾಲ್ಮೇಲಿನ ತುಂಡು ಚಡ್ಡಿ
ಹೆಗಲ ಮೇಲಿನ ಚೀಲದಿಂದ
ಇಣುಕುತ್ತಿದ್ದ ಹಳೆಯ ಪೇಪರ್,
ಪ್ಲಾಸ್ಟಿಕ್ಕಿನ ಬಾಟಲಿಗಳು.

ಹಗಲೆಲ್ಲಾ ಅಲೆದಲೆದು ತಂದದ್ದೆಲ್ಲಾ
ಸಂಜೆಗೆ ಗುಜರಿಯವನ ಹಿತ್ತಲಿಗೆ,
ಕೈಮೇಲೆ ಸಿಕ್ಕಿದ್ದು ಒಂದೆರಡೇ ಕಾಸು
ಹರಿದ ಬದುಕಿನ ಹೊಟ್ಟೆಗೆ,
ಕಂಡ ಕನಸಿನ ನನಸಿಗೆ.

ಅದೇ ಕಸದ ರಾಶಿಯ ಬದಿಯ
ಮರಕೆ ಬಿಗಿದ ಅವ್ವನ
ಹರಿದ ಸೀರೆಯ ಜೋಕಾಲಿಯ
ಜೀಕುವಾಗ…ಜೀವನವನ್ನೇ
ಜಯಿಸಿದ ಆನಂದ ಆ ಕಣ್ಗಳಲಿ.

ನಾಗರೀಕತೆಯ ನಾಟಕದ
ಈ ಮುಗ್ಧತೆಗೆ ಪಾತ್ರವಿಲ್ಲ…
ಅಕ್ಷರದ ರುಚಿ ಕಂಡಿಲ್ಲ…
ದೊರಕಿದ್ದು ಕೇವಲ ಅರೆಹೊಟ್ಟೆಯ ಗಂಜಿ
ಅರೆಬೆಳಕಿನ ಗುಡಿಸಲೊಳಗೆ…!!

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago