ಜೀವಿಯ ಉಸಿರಿಗೆ ಹಸಿರನು ತುಂಬುವ
ಅಮೃತ ಸುಧೆಯೆ ಮಣ್ಣು!
ಪ್ರಕೃತಿ ಮಾತೆಯು ಲೋಕಕೆ ನೀಡಿದ
ಜಡಚೇತನಗಳ ಕಣ್ಣು!
ಅನಂತ ಗರ್ಭದ ಕಣಕಣದಲ್ಲು
ಅಡಗಿದೆ ಹೊಳಪಿನ ಹೊನ್ನು!
ಕೋಟಿ ವಿದ್ಯೆಗೆ ಮಿಗಿಲನು ನೀಡಿದೆ
ಮೇಟಿ ಕಾಯಕವನ್ನು !
ಮರುಳತನದಲಿ ತುಂಬುತಲಿರುವೆವು
ವಿಷದ ಗೊಬ್ಬರವನ್ನು!
ಮಕ್ಕಳ ತಪ್ಪನು ಸಹಿಸುತಲಿರುವಳು
ಸುರಿಸುತ ಕಣ್ಣೀರನ್ನು!
ಮೊಲೆಹಾಲೂಡುವ ತಾಯಿ ಎನ್ನದೆ
ಮುರಿದರೆ ಹೇಗೆ ಗೋಣು!
ಮಿತಿಯೇ ಇಲ್ಲದ ಆಸೆಯು ಏತಕೆ
ಹೊಟ್ಟೆ ಇರುವುದು ಗೇಣು!
ಸಂತಸದಿಂದಲಿ ಕೊಡಮಾಡುವಳು
ಸವೆಯದೆ ಇರುವ ಜೇನು!
ಉಳಿಸಿಬೆಳೆಸುವ ಚಿಂತನೆ ನಡೆಯಲಿ
ಪೊಡವಿಯ ಕಾಮಧೇನು!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…