ದನಿ ಕ್ಷೀಣಿಸುತ್ತಿದೆ
ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ
ಗಾಳಿ ಉಪದೇಶಿಸುವ ಹೊತ್ತಲ್ಲಿ
ದಾರಿಗೆ ಕತ್ತಲಾವರಿಸಿದೆ
ದನಿ ಕ್ಷೀಣಿಸುತ್ತಿದೆ
ದಿಕ್ಕೆಟ್ಟ ಉಸಿರಿಗೆ
ಉಸಿರುಗಟ್ಟಿಸುವ
ಗೀಜಗನ ಗೂಡಿನ ನೆರಳಲ್ಲಿ
ದನಿ ಕ್ಷೀಣಿಸುತ್ತಿದೆ
ಮಾಂಸ ಮಜ್ಜೆಯ ಚಾಚಿ
ತುಳಿಸಿಕೊಂಡ ಬಾಲ್ಯ
ಮಣ್ಣಿಗೆ ಹತ್ತಿರವಾಗುತ್ತಿದೆ
ದನಿ ಕ್ಷೀಣಿಸುತ್ತಿದೆ
ಉಬ್ಬುಗಳ ಕಣ್ಣ ಕಡಲ ಹೀರುವ ತವಕದಲಿ
ಮರಗಟ್ಟುವ ತುಟಿಗಳ ಪರಿಭಾಷೆಯಲಿ
ಆಕಾಶ ಕೆಂಡದ ದನಿಯಲಿ
ದನಿ ಕ್ಷೀಣಿಸುತ್ತಿದೆ
ಪಾಯವಿಲ್ಲದ ಬಳ್ಳಿಗಳ ಆಲಿಂಗನದ ಕಸುವಿನಲಿ
ಚಪ್ಪಾಳೆಗಳ ಹರಿದು ಹಂಚುವಲ್ಲಿ
ಬೆಟ್ಟದ ಪಡಿಯ ತುತ್ತಿನಲಿ ಹೊತ್ತು ಮುತ್ತಾಗಿ ಹೊಳೆವ ಹೊತ್ತಲ್ಲಿ
ಮಳೆ ಹನಿಗಳ ನೂರೆಂಟು ಗಾಯಗಳು ಮಾತಿಗಿಳಿಯುವ ಮುನ್ನ
ದನಿ ಕ್ಷೀಣಿಸುತ್ತಿದೆ
ನೆತ್ತರಿಗೆ ಚಾಕು ಚೂರಿಯ ಬಣ್ಣ ಬಳಿದು
ಕೆಂಡವ ಬಿಸಾಡಿ
ಹೊತ್ತಿ ಉರಿಯುವ ನೆತ್ತಿಗಳೆಲ್ಲ
ಬಟಾ ಬಯಲಾಗುವ ಚಣದಲಿ
ನಕ್ಷತ್ರಗಳೆಲ್ಲ ಬೆಟ್ಟಗಳ ಕನವರಿಸುವಲ್ಲಿ
ದನಿ ಕ್ಷೀಣಿಸುತ್ತಿದೆ
ಹೃದಯ ತೆರೆದಿಡುವಲ್ಲಿ
ಬಾಣಂತಿಯ ಮೊಲೆಗೆ ತುಟಿಗಳು ತಾಗುವಾಗ
ಬಟ್ಟಲನ್ನ ಉಣ್ಣುವಾಗ
ಬರಿಮೈ
ಬರಿಗಾಲು
ಬಿರುಕುಗಳ ಧ್ಯಾನಿಸುವಾಗ
ದನಿ ಕ್ಷೀಣಿಸುತ್ತಿದೆ
ಒಡೆದ ಅಂಗಿ ಗುಂಡಿಗಳ ದೋಣಿಯ ಕಂಪನಕ್ಕೆ
ಆಕಾಶ ರೆಕ್ಕೆಗಳು ಪುಡಿ ಪುಡಿಯಾಗುವಾಗ
ದನಿ ಕ್ಷೀಣಿಸುತ್ತಿದೆ
ಬೆತ್ತಲೆ ಮೆರವಣಿಗೆಯಲಿ
ಬೆತ್ತಲಾಗದ ಬತ್ತಲ ಬ್ರಹ್ಮಾಂಡಕೆ
ನೆತ್ತರಿಗಂಟಿದ ಮೋಡಗಳ ಮೌನಕೆ
ತಾಯ್ನೆಲದ ಬಿಕ್ಕಳಿಕೆಯಲಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
👌