ಓ.. ದೇವಾ..
ಎಲ್ಲವನ್ನು ನನ್ನಿಂದ
ಕಸಿದುಕೊಂಡ ಮೇಲೆ
ನನಗಾಗಿ ಉಳಿಸಿದ್ದಾದರೂ ಏನು..?
ಬರೀ ಶೂನ್ಯ
ನೋವುಗಳ ಹೊರತೂ
ಅಷ್ಟು ಅವಸರವೇನಿತ್ತು..?
ಆ ಜವರಾಯನಿಗೆ
ಹೆತ್ತವರ ಮೇಲೆ ಕಣ್ಣು ತಾಕಿಸಿ
ಅನಾಥಳೆಂಬ ಹೊದಿಕೆ ಹೊದಿಸಿ
ಪ್ರೀತಿ,ವಾತ್ಸಲ್ಯಗಳಿಂದ
ದೂರವಾಗಿಸಿಬಿಟ್ಟ
ಬಯಸಿದ ಬಯಕೆಗಳಿಗೆ
ಇಲ್ಲಿ ಬೆಲೆಯೇ ಇಲ್ಲ
ಆಸೆಗಳನ್ನು ಮೂಟೆ ಕಟ್ಟಿ
ಅಟ್ಟಕ್ಕೇರಿಸಿ ವರುಷಗಳೇ ಉರುಳಿವೆ
ಒಬ್ಬಬ್ಬರಾಗಿ ಮೆಲ್ಲಗೆ
ಸರಿದು ದೂರಾಗುತಿಹರು
ನೆರೆಹೊರೆಯವರು ಮಾತಿಗಷ್ಟೇ ಸೀಮಿತ
ಬಂಧುಗಳನ್ನಂತೊ ಕೇಳಲೇಬೇಡಿ
ವ್ಯಾಪ್ತಿ ಪ್ರದೇಶದಿಂದ ಬಹುದೂರ
ನೊಂದು ಬೆಂದ ಜೀವಕೆ
ಸಾಂತ್ವನದ ನುಡಿಗಳಿಗೂ ಬರ
ಸಿರಿತನವೇನು ಬೇಡ ದೇವಾ..
ಅತ್ತಾಗ ಕಣ್ಣೊರೆಸುವ
ಸಿರಿವಂತಿಕೆಯ ಕೈಗಳೇ ಸಾಕು
ಆಂತರ್ಯದ ಬೇಗುದಿಯ ನುಡಿಗಳಿಗೆ
ಕಿವಿಯಾಗುವವರು ಬೇಕು
ಜೊತೆಗೆ ದನಿಯಾಗುವವರಿದ್ದರೆ ಸಾಕು
ಈ ದೀನಳ ಬದುಕು ಹಸನಾದೀತು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಸೂಪರ್ ಹಿಟ್ ಕವನ