ಕವಿತೆಗಳು

ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ “ಬಂಧನವಾಗದಿರಲಿ ಈ ಸಂಬಂಧ”

ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ
ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ
ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ ಬೆಲೆ.

ತಾಯಿಗೆ ತಕ್ಕ ಮಗ, ಮಕ್ಕಳಿಗೆ ಆದರ್ಶ ಅಪ್ಪನಾಗಬೇಕು
ಪತ್ನಿಗೆ ಒಪ್ಪುವ ಪತಿ, ಸಮಾಜಕ್ಕೆ ಸತ್ಪ್ರಜೆಯಾಗಬೇಕು
ಆದರೆ,ಯಾರು ಸಹ ಕೇಳರು ಅವನಿಗೆ ಏನು ಬೇಕು?

ಓದಿ ಒಳ್ಳೆಯ ಕೆಲಸ ಸೇರಿ ಜೀವನದಲ್ಲಿ ಯಶಸ್ಸು ಕಾಣಬೇಕು
ಕಷ್ಟವೆನಿಸಿದರೂ ತನ್ನವರ ಹಿತಕ್ಕಾಗಿ ದುಡಿಯಬೇಕು
ಒಂದಲ್ಲ, ಎರಡಲ್ಲ ಎಲ್ಲ ಜವಾಬ್ದಾರಿ ಹೊತ್ತು ಸಾಗಬೇಕು.

ಅತ್ತರಷ್ಟೇ ನೋವಾಗಿದೆ ಎಂದು ಅರ್ಥವೇ!
ತನ್ನವರೊಂದಿಗೆ ಪ್ರೀತಿಯ ಮಾತನಾಡದಿದ್ದರೆ ಅಕ್ಕರೆಯಿಲ್ಲವೇ?
ಎಲ್ಲವೂ ಅವನಲ್ಲಿ ಉದುಗಿದೆ ನವಿರು ಭಾವನೆ ಅರಿತಿಲ್ಲವೇ?

ಎಷ್ಟೇ ಬಲಶಾಲಿಯಾದರೂ ಶಕ್ತಿ ತುಂಬಲು ಸಂಬಂಧ ಬೇಕು
ದಣಿದ ದೇಹ ಮನಸ್ಸಿಗೆ ಸ್ಪಂದಿಸುವ ಪ್ರೀತಿಯ ಮನ ಬೇಕು
ಸಂಬಂಧಗಳ ಬಂಧವೂ ಆಗಲಿ ಅನುಬಂಧ
ಬಂಧನವಾಗದಿರಲಿ ಈ ಸಂಬಂಧ.

SHANKAR G

View Comments

  • Alright, 8okslot, I see you! Just gave it a spin and gotta say, not bad at all. Smooth gameplay and bonuses seem alright. Maybe I'll get lucky, who knows! Check it out for yourself 8okslot.

  • Yo, check out ev999. Info! I've been playing there for a bit and it's pretty solid. Good selection of slots and live games. Bonus is pretty juicy too. Give it a whirl! ev999

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago