ಹೆಣ್ಣು ಹೆಣ್ಣೆಂದರಷ್ಟೇ ಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ
ಮನೆಗೆ , ಮನಕ್ಕೆ ಬಂದೆ
ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ
ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ
ಜನನಿಯಾಗಿ ಸಾರ್ಥಕವಾದೆ
ಕೈಹಿಡಿದು ನಡೆದೆ, ತಿದ್ದಿ ತಿಡಿದೆ
ಊರುಗೋಲಾಗಿ ಆಸರೆಯಾದೆ
ಜೊತೆಯಾಗಿ ಬೆಳೆದೆ , ಆಟ ಹುಡುಗಾಟವಾಡಿದೆ
ಸೊಸೆಯಾಗಿ ಪರರಿಗೆ ನೀ ಜ್ಯೋತಿಯಾದೆ
ದಾರಿ ತೋರಿದೆ, ಮಾರ್ಗದರ್ಶಿಯಾದೆ
ಗುರಿಯಾಗಿ ನೀ ಗುರುವಾದೆ
ಧೃತಿಯ ಗೆಡದೆ , ಹೆಜ್ಜೆಯ ಹಿಂದೆ ಸರಿಯದೆ
ಮುನ್ನಡೆಯಾಗಿ ಮುಂದಾಳುವಾದೆ
ತಾಳ್ಮೆಯ ತಾಳಿನೀ ಧರಿತ್ರಿ
ದಾಹವನು ತೀರಿ ನೀ ಗಂಗೆ
ಎಲ್ಲವನ್ನು ನುಂಗಿ ನೀ ಸಾಗರಿ
ಹೆಣ್ಣುಹೆಣ್ಣೆಂದರಷ್ಟೆಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…