ಕವಿತೆಗಳು

ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ “ಮಹಿಳಾ ಮಣಿ”

ಹೆಣ್ಣು ಹೆಣ್ಣೆಂದರಷ್ಟೇ ಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ

ಮನೆಗೆ , ಮನಕ್ಕೆ ಬಂದೆ
ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ
ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ
ಜನನಿಯಾಗಿ ಸಾರ್ಥಕವಾದೆ

ಕೈಹಿಡಿದು ನಡೆದೆ, ತಿದ್ದಿ ತಿಡಿದೆ
ಊರುಗೋಲಾಗಿ ಆಸರೆಯಾದೆ
ಜೊತೆಯಾಗಿ ಬೆಳೆದೆ , ಆಟ ಹುಡುಗಾಟವಾಡಿದೆ
ಸೊಸೆಯಾಗಿ ಪರರಿಗೆ ನೀ ಜ್ಯೋತಿಯಾದೆ

ದಾರಿ ತೋರಿದೆ, ಮಾರ್ಗದರ್ಶಿಯಾದೆ
ಗುರಿಯಾಗಿ ನೀ ಗುರುವಾದೆ
ಧೃತಿಯ ಗೆಡದೆ , ಹೆಜ್ಜೆಯ ಹಿಂದೆ ಸರಿಯದೆ
ಮುನ್ನಡೆಯಾಗಿ ಮುಂದಾಳುವಾದೆ

ತಾಳ್ಮೆಯ ತಾಳಿನೀ ಧರಿತ್ರಿ
ದಾಹವನು ತೀರಿ ನೀ ಗಂಗೆ
ಎಲ್ಲವನ್ನು ನುಂಗಿ ನೀ ಸಾಗರಿ
ಹೆಣ್ಣುಹೆಣ್ಣೆಂದರಷ್ಟೆಸಾಕೆ
ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ

SHANKAR G

View Comments

  • Hey, if anyone is looking for a new gaming site to check out, I recommend pakwin777. I've been playing there for awhile, and the game selection is awesome.pakwin777

  • Gave phoneclubapp a whirl. Seemed pretty straightforward, and easy to use! If you're into phoneclubs like me, phoneclubapp might be just what you're looking for.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago