ಕವಿತೆಗಳು

ಸಂತೋಷ್ ಟಿ ಅವರು ಬರೆದ ಕವಿತೆ “ಚಿರ -ಪರಿಚಿತರು”

ಜಾಣ ಕಣ್ಣೀದ್ದು ಚಾಳೀಸುಧಾರಿಗಳು
ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು
ವಾಕ್ ಸರಿಯಿದ್ದು ಮಾತಿನ ಚೌಕಸಿಗರು
ನೋಡುತ್ತಿಲ್ಲ ನೊಂದು ಬೆಂದವರ ಬದುಕು
ಕೇಳುತ್ತಿಲ್ಲ ಕರುಳ ವೀಣೆಯ ಕೂಗು
ಮನುಕುಲದ ಮಾನವೀಯತೆ ಕೊಂದ
ಇವರುˌ ಹ್ರದಯ ಶ್ರೀಮಂತರು

ಸೌಜನ್ಯಕ್ಕೆ ಸೂತ್ರಧಾರಿಗಳು
ಸಭ್ಯತೆಗೆ ಪಾರ್ಟಿ ವಿನೋದಗಳು
ವ್ಯಕ್ತಿತ್ವವಿದ್ದರೂ ಬೇಕೆಂದೆ ಕಳೆದುಕೊಂಡ
ಇವರುˌಯಾವಾಗಲೂ ಶಿಸ್ತಿಗೆ ಬದ್ಧರು
ಅನ್ಯಾಯಕ್ಕೆ ಪ್ರಬುದ್ಧರು

ತಂಪಾದ ಪರಿಸರವನ್ನು ಪಿತೂರಿಯಿಂದಲೆ
ವಿಷಾನಿಲ ಮಾಡುವ ಸಾಹಸಿಗರು
ಇವರುˌ ತುಂಬಾ ಜಾಣರು
ಬುದ್ಧ – ಬಸವ – ಗಾಂಧಿಯರನ್ನು
ಜಯಂತಿ ಭಜಂತ್ರಿಗಳಲ್ಲಿ ಪೂಜಿಸಿ
ಜಂಗಮವಾಗಿ ಮೆರೆಯುವರು

ಮಲಿನವಾದ ಮಡುವಿನಲ್ಲಿ ಮುಳುಗಿ
ಭ್ರಷ್ಟವಾದ ದೋಷಗಳಲ್ಲಿ ತೇಲಿ
ಇಲ್ಲಸಲ್ಲದ ಸುಖವ ಸಂಪಾದಿಸುವ
ಚಪಲದಲಿ ರಣರಂಗ ಕಟ್ಟಿದವರು
ಭರವಸೆಯ ಸ್ಯಾಂಪಲ್ಲಿಗೆ ಭಾಷಣ ಬಿಗಿದು
ಮಿಕ್ಕಂತೆ ಮೌನವಾಗುವ ಇವರು
ಎಲ್ಲರಿಗೂ ಚಿರ – ಪರಿಚಿತರು.

SHANKAR G

View Comments

  • Alright, check out 9apisoph if you're looking for something a bit different. Not my usual cup of tea, but someone might find it interesting. Have a look: 9apisoph

  • Okay, php777login is where it's at! Got some exciting promos. The login on php777login is nice and quick to access the wide selection of games they offer. Check it out today: php777login

  • Ok83865 just popped up on my radar. Looks decent enough. Had a quick browse. Might give it a proper go later this week. If you're curious, take a peek ok83865.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago