ಜಾಣ ಕಣ್ಣೀದ್ದು ಚಾಳೀಸುಧಾರಿಗಳು
ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು
ವಾಕ್ ಸರಿಯಿದ್ದು ಮಾತಿನ ಚೌಕಸಿಗರು
ನೋಡುತ್ತಿಲ್ಲ ನೊಂದು ಬೆಂದವರ ಬದುಕು
ಕೇಳುತ್ತಿಲ್ಲ ಕರುಳ ವೀಣೆಯ ಕೂಗು
ಮನುಕುಲದ ಮಾನವೀಯತೆ ಕೊಂದ
ಇವರುˌ ಹ್ರದಯ ಶ್ರೀಮಂತರು
ಸೌಜನ್ಯಕ್ಕೆ ಸೂತ್ರಧಾರಿಗಳು
ಸಭ್ಯತೆಗೆ ಪಾರ್ಟಿ ವಿನೋದಗಳು
ವ್ಯಕ್ತಿತ್ವವಿದ್ದರೂ ಬೇಕೆಂದೆ ಕಳೆದುಕೊಂಡ
ಇವರುˌಯಾವಾಗಲೂ ಶಿಸ್ತಿಗೆ ಬದ್ಧರು
ಅನ್ಯಾಯಕ್ಕೆ ಪ್ರಬುದ್ಧರು
ತಂಪಾದ ಪರಿಸರವನ್ನು ಪಿತೂರಿಯಿಂದಲೆ
ವಿಷಾನಿಲ ಮಾಡುವ ಸಾಹಸಿಗರು
ಇವರುˌ ತುಂಬಾ ಜಾಣರು
ಬುದ್ಧ – ಬಸವ – ಗಾಂಧಿಯರನ್ನು
ಜಯಂತಿ ಭಜಂತ್ರಿಗಳಲ್ಲಿ ಪೂಜಿಸಿ
ಜಂಗಮವಾಗಿ ಮೆರೆಯುವರು
ಮಲಿನವಾದ ಮಡುವಿನಲ್ಲಿ ಮುಳುಗಿ
ಭ್ರಷ್ಟವಾದ ದೋಷಗಳಲ್ಲಿ ತೇಲಿ
ಇಲ್ಲಸಲ್ಲದ ಸುಖವ ಸಂಪಾದಿಸುವ
ಚಪಲದಲಿ ರಣರಂಗ ಕಟ್ಟಿದವರು
ಭರವಸೆಯ ಸ್ಯಾಂಪಲ್ಲಿಗೆ ಭಾಷಣ ಬಿಗಿದು
ಮಿಕ್ಕಂತೆ ಮೌನವಾಗುವ ಇವರು
ಎಲ್ಲರಿಗೂ ಚಿರ – ಪರಿಚಿತರು.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…