ಬರೆದರೇನು ಫಲ ಬೆಳೆದರೇನು ಫಲ
ಹಳ್ಳಿಗಳಿಂದ ತುಂಬಿ ತುಳುಕುವ
ಭಾರತಾಂಬೆಯ ಮಡಿಲು ಅನ್ನದಾತ
ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ
ಭಾವಚಿತ್ರಕ್ಕಾಗಿ ಕಾಯದ ಕಾಯಕ
ಜೀವಿ ಛಾಯಾಗ್ರಾಹಕರಿಗೆ ಫಲ
ಬರೆಯುವ ಲೇಖನಿಗೆ ಫಲ ಇವನ
ಬಗ್ಗೆ ಕವನ ಲೇಖನ ಬರೆದರೆನು ಫಲ
ಸದಾ ಕೆಂಪು, ಕಪ್ಪು ಕಲ್ಲು ಬಂಡೆ
ಸುಣ್ಣಬುರಲಿ ಭೂಮಿಯಲಿ ಉತ್ತು ಬಿತ್ತಿ
ಬೆಳೆದು ಫಲ ದಕ್ಕುವದ್ ಯಾರಿಗೆ
ಹಂಚಿ ತಿನ್ನುವನಿಗೆ ಉಳಿವದು ಫಲ
ಅದೇ ರಂಟೆ, ಕುಂಟೆ, ಬಾರಕೋಲು
ಮುಂಜಾನೆ ರವಿ, ತಂಪು ಗಾಳಿ
ಬೀಜ ಗೊಬ್ಬರ, ಜೋಡೆತ್ತು, ಮೂಗುದಾರ
ಅದಿಲ್ಲದಿರೆ ಮಾತು ಕೆಳವು ಆಕಾಶ ಕೂಡಾ
ಗೋಣಿ ಚೀಲ ತುಂಬುವದು ಒಂದು
ಕೆಜಿ ಬೀಜದೀ ಒಕ್ಕಿ, ಹಸನಮಾಡಿ
ಚಕ್ಕಡಿಯಲಿ ಹೊತ್ತು ಸಾಗಿದಾಗ ಸಿಗುವ
ಫಲ ಕನಸು ಕಂಗಳ ತುಂಬಾ ನನಸು
ಸಾಲದ ಶೂಲ ಮನೆಯಲ್ಲಿ ಮಕ್ಕಳ ಓದು
ಮಗಳ ಮದುವೆ, ಕಾಯಿಲೆ ಅಪ್ಪ, ಅಮ್ಮ
ಜೊತೆಗೆ ಬೇಕುಗಳು ಮೋಬೈಲ್ , ಟಿವಿ
ಕಾರು, ಹೀರೋಹೋಂಡಾ, ಯಾರಿಗೆ ಫಲ?
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…