ಮಿಂಚುಳ್ಳಿ ಕಾರ್ಯಕ್ರಮಗಳ ಚಿತ್ರಗಳು

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-

೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ.

೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮನಸುಗಳ ಪ್ರತಿಷ್ಠಾನದೊಂದಿಗೆ ನಮ್ಮ “ಕಾವ್ಯಮರ” ಸಹಯೋಗದೊಂದಿಗೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕರಾದ ಡಾ. ಎಮ್.ಎಸ್. ಆಶಾದೇವಿಯವರು ವಹಿಸಿಕೊಂಡಿದ್ದರು. ಕೆ.ಎ.ಎಸ್. ಅಧಿಕಾರಿಗಳಾದ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರು “ಯುವ ಸಮುದಾಯಕ್ಕೆ ಬೇಕಾದ ಕುವೆಂಪು” ವಿಷಯದ ಮೇಲೆ ಉಪನ್ಯಾಸವನ್ನು ನೀಡಿದ್ದರು.

೩. 2018ರಲ್ಲಿ ಹಿಂದಿಯ ಖ್ಯಾತ ಕಥೆಗಾರರಾದ ಪ್ರೇಮಚಂದರ ಕಥೆಯಾಧರಿತ “ಹೆಣದ ಬಟ್ಟೆ” ನಾಟಕ ಪ್ರದರ್ಶನ.

೪. 2018ರಲ್ಲಿ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ.

೫. 2019ರಲ್ಲಿ ಜಾರ್ಜ್ ಆರ್ವೆಲ್ ಅವರ ‘ಅನಿಮಲ್ ಫಾರ್ಮ್’ ಕಾದಂಬರಿ ಆಧಾರಿತ ‘ಅನಿಮಲ್ ಫಾರ್ಮ್’ ನಾಟಕ ಪ್ರದರ್ಶನ.

೬. 2019ರಲ್ಲಿ ರಾಜ್ಯ ಮಟ್ಟದ ಮಿಂಚುಳ್ಳಿ ಕಾವ್ಯ ಪುರಸ್ಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೊದಲ ಬಹುಮಾನವನ್ನು ಡಾ. ಸತ್ಯಮಂಗಲ ಮಹಾದೇವ, ಎರಡನೆಯ ಬಹುಮಾನವನ್ನು ಗೀತಯೋಗಿ ಮತ್ತು ಮೂರನೆಯ ಬಹುಮಾನವನ್ನು ರಮೇಶ್ ನೆಲ್ಲಿಸರ ಅವರು ಪಡೆದುಕೊಂಡಿದ್ದರು. ಹಿರಿಯ ಸಾಹಿತಿಗಳಾದ ಎಲ್. ಎನ್. ಮುಕುಂದರಾಜ್, ಸವಿತಾ ನಾಗಭೂಷಣ ಮತ್ತು
ಎಚ್. ಎಸ್. ರೇಣುಕಾರಾಧ್ಯ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

೭. 2020ರಲ್ಲಿ ‘ಕಾಡುವ ಕಿರಂ’ ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಲಾಗಿತ್ತು.

೮. 2020ರಲ್ಲಿ ನಿರಂತರ ಏಳು ದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ‘ಅರಸಿ ಸಾಂಸ್ಕೃತಿಕ ವೇದಿಕೆ (ರಿ)’ ಸಂಸ್ಥೆಯೊಂದಿಗೆ ಏರ್ಪಡಿಸಲಾಗಿತ್ತು.

೯. 2020ರಲ್ಲಿ “ಪಳಗನ್ನಡ ಓದು” ಆನ್ಲೈನ್ ಕಾರ್ಯಕ್ರಮದ ಮೂಲಕ ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಮತ್ತು ಡಾ. ಪ್ರಹ್ಲಾದ ರೆಡ್ಡಿ ಅವರು ರನ್ನನ “ಸಾಹಸ ಭೀಮ ವಿಜಯಂ” ಕೃತಿಯ ಆಯ್ದ ಪದ್ಯಗಳ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದರು.

೧೦. 2023ರಲ್ಲಿ ವೆಬ್ಸೈಟ್ ಮೂಲಕ https://minchulli.com ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟ.

೧೧. 2023ರಲ್ಲಿ ‘ಕಾಡುವ ಕಿರಂ’ ರಾಜ್ಯಮಟ್ಟದ ಕಾರ್ಯಕ್ರಮಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಒಟ್ಟು ನೂರು ಕವಿಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿಸಲಾಗಿತ್ತು. ಒಟ್ಟಾರೆ ಕವಿಗೋಷ್ಠಿಯ ನಿರ್ವಹಣೆ ಮತ್ತು ಕವಿಗೋಷ್ಠಿಗಳ ಕವಿತೆ ಮತ್ತು ಆಯಾ ಗೋಷ್ಠಿಗಳ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕ “ಕಿರಂ ಹೊಸ ಕವಿತೆ ೨೦೨೩” ಮಿಂಚುಳ್ಳಿ ಪ್ರಕಾಶನದಿಂದ ಪ್ರಕಟಿಸಲಾಗಿದೆ.

೧೨. 2023ರಲ್ಲಿ ಹಿರಿಯ ಸಾಹಿತಿಗಳಾದ ಸುಜಾತಾ ಹೆಚ್.ಆರ್. ಅವರ ಮನೆಯಲ್ಲಿ ‘ಕಥೆಗಿಣಿಚ’ ಇದು ಕಥೆಗಳ ಚಿಂತನ-ಮಂಥನ ಕಾರ್ಯಕ್ರಮದ ಮೂಲಕ ಸಮಕಾಲೀನ ಕಥೆಗಾರರ ಕಥೆಗಳ ಓದು ಮತ್ತು ವಿಮರ್ಶೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

೧೩. 2023ರಲ್ಲಿ ಲಿಂಗ ಸಮಾನತೆ (Gender Equality) ವಿಷಯದ ಮೇಲಿನ ಒಟ್ಟು 25 ದೇಶಗಳ ಸಮಕಾಲೀನ ಇಂಗ್ಲಿಷ್ ಕವಿಗಳ ಕವಿತೆಗಳನ್ನು ಒಳಗೊಂಡಿರುವ “Love is a Divine Fragrance” ಅಂತಾರಾಷ್ಟ್ರೀಯ ಸಂಪಾದನೆಯ ಇಂಗ್ಲಿಷ್ ಪುಸ್ತಕವನ್ನು ಪ್ರಕಟಿಸಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

೧೪. 2023ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಸವಿತಾ ನಾಗಭೂಷಣ, ಡಾ. ರಾಮಲಿಂಗಪ್ಪ ಟಿ . ಬೇಗೂರು, ಚನ್ನಪ್ಪ ಅಂಗಡಿ, ಡಾ. ಎಚ್.ಎಸ್. ಸತ್ಯನಾರಾಯಣ, ಸುಜಾತಾ ಎಚ್.ಆರ್. ಮತ್ತು ಡಾ. ಬೇಲೂರು ರಘುನಂದನ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೫. 2024ರಲ್ಲಿ ಮಿಂಚುಳ್ಳಿ ಪ್ರಕಾಶನದ ‘ಬಿದಿರ ತಡಿಕೆ’, ‘ಮಳೆ ಪ್ರಬಂಧಗಳು’ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಚೊಚ್ಚಲ ಸಂಚಿಕೆಯ ಬಿಡುಗಡೆಯ ಕಾರ್ಯಕ್ರಮ ಮತ್ತು ಮಿಂಚುಳ್ಳಿ ಕವಿಗೋಷ್ಠಿಯನ್ನು ಬೆಂಗಳೂರಿನ ಕಲಾ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಎಮ್.ಆರ್. ಕಮಲ ಅವರು ವಹಿಸಿಕೊಂಡಿದ್ದರು.

೧೬. 2024ರಲ್ಲಿ ಸಪ್ನ ಬುಕ್ ಹೌಸ್ ನಡೆಸಿದ “ಸಪ್ನ ಯುಗಾದಿ ಕಥಾಸಂಗಮ” ಕಾರ್ಯಕ್ರಮದಲ್ಲಿ ಸಮಕಾಲೀನ ಹೊಸ ತಲೆಮಾರಿನ ಕಥೆಗಾರರ ಕಥೆಗಳ ಓದು ಮತ್ತು ಚರ್ಚೆಯನ್ನು ಕಥೆಗಾರರು ಮತ್ತು ಓದುಗರೊಂದಿಗೆ ನಡೆಸಲಾಗಿತ್ತು.

೧೭. 2024ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಎಲ್.ಎನ್. ಮುಕುಂದರಾಜ್,
ಡಾ. ಅಮರೇಶ ನುಗಡೋಣಿ, ಡಾ. ಕರೀಗೌಡ ಬೀಚನಹಳ್ಳಿ, ಡಾ. ರವಿಕುಮಾರ್ ಪಿ.ಜಿ., ಮತ್ತು ಡಾ. ಗುರುಸ್ವಾಮಿ ಸಿ. ಅನ್ನೇಹಾಳ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೮. 2024 ಜನವರಿ ತಿಂಗಳಿನಿಂದ ಮಿಂಚುಳ್ಳಿ ಕನ್ನಡ ಸಾಹಿತ್ಯ ಮಾಸಿಕವನ್ನು ಮುದ್ರಿಸಲು ಆರಂಭಿಸಿತು.

****

email: editor@minchulli.com
facebook: minchulli sahitya patrike
instagram: @minchullisahityapatrike
X: @minchullibooks

PDF: ಮಿಂಚುಳ್ಳಿ ಕಾರ್ಯಚಟುವಟಿಕೆಗಳು

PDF English: The literary activities of Minchulli Magazine in Kannada Language

ಕಳೆದ 8 ವರ್ಷಗಳಲ್ಲಿ ಮಿಂಚುಳ್ಳಿ ನಡೆಸಿದ ಕಾರ್ಯಕ್ರಮಗಳ ಫೋಟೋಗಳು:-

ಮಿಂಚುಳ್ಳಿ ಪ್ರಕಟಿತ ಪುಸ್ತಕಗಳು:-

ಮಿಂಚುಳ್ಳಿ ಸಾಹಿತ್ಯ ಮಾಸಿಕ ಸಂಚಿಕೆಗಳು

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago