ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ
ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ
ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು
ಮಳೆ ಗಾಳಿಯಿಂದಲ್ಲ ನೋಟ ಸ್ಥಾವರಗಳ ಸೀಳದಂತಿಡಬೇಕಾಗಿದೆ
ಸಪ್ಪೆಯಾಗುತ್ತಿವೆ ಉಪ್ಪಿನ ಕುರಿತಾದ ಕಥೆ ಕವನಗಳು
ರುಚಿಯ ಊರಿನಲಿ ಸಂಗೀತದ ಕಛೇರಿಗಳ ನಡೆಸಬೇಕಾಗಿದೆ
ಪುಗಸಟ್ಟೆ ಬಾಜಾರಲಿ ಮಾರಾಟಕ್ಕಿವೆ ಹಳಸಿದ ಪರಿಕರಗಳು
ಕೊಳ್ಳುಬಾಕರ ಮುಂದುಗಡೆ ಖಾಲಿ ಗಾಡಿಗಳ ಓಡಿಸಬೇಕಾಗಿದೆ
ಕೆಂಡವಿಲ್ಲದ ಒಲೆಯಲಿ ಅಡುಗೆ ಮಾಡಬೇಡ ‘ಕವಿ’
ಭ್ರಮೆಯ ತಾಟಿನಲಿ ಬಡಿಸಿದ ತುತ್ತುಗಳ ಉಣ್ಣಬೇಕಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
Super
Wonderful gajhal sir 🙏🙏🙏
ಇಂದಿನ ಶಿಕ್ಷಣ ಕಲಿಯುವ ಮಕ್ಕಳ ಪರಿಸ್ಥಿತಿ ಈ ರೀತಿಯಾದ ವ್ಯವಸ್ಥೆಯಾಗಿದೆ ಗಜಲ್ ತುಂಬಾ ಚೆನ್ನಾಗಿದೆ
Super sir
ದಿಲ್ನುಮಾ ಗಝಲ್ ಕವಿಗಳೇ