ಅಕ್ಷರಗಳು ಎದೆಯಿಂದ
ಅಳಿಸಿಹೋಗಿ ಬಹಳ ದಿನಗಳೇ
ಆದವು..
ಈ ಮೊದಲು ಇರುಳೆಂದರೇ
ಕಣ್ತುಂಬ ಅಕ್ಷರಗಳೇ ಅವನ
ನಗು, ಪಿಸುಮಾತು, ಬೈಗುಳ
ತುಟಿಯ ಕೊಂಕು ಹೀಗೆ..
ಅಕ್ಷರಗಳ ಸಾಲು ಸಾಲು
ಎದೆಗಿಳಿದು ಜಾವಕ್ಕೊಂದರಂತೆ
ಕವಿತೆಗಳು ಕನಸಾಗಿ ಕಣ್ತುಂಬಿಕೊಳ್ಳುತ್ತಿತ್ತು
ಈಗಲೂ ಇರುಳಾಗುತ್ತದೆ
ಅವನೂ ಸಹ ನೆನಪಾಗುತ್ತಾನೆ
ಮೊದಲು ಮಾತು ಕಸಿದು ಕೊಂಡಿದ್ದು,
ನಂತರ ನಗು, ನಿದ್ದೆ,ಬಕಾಸುರನವನು
ಎದೆಯ ಅಕ್ಷರಗಳನ್ನು ಬಿಡದೆ ಬಾಚಿಕೊಂಡು
ಸದ್ದಾಗದಂತೇ ತೇಗುತ್ತಾನೆ
ಖಾಲಿತನದ ಖುಷಿಯಲ್ಲೇ
ಕವಿತೆ ಕಳಿದದ್ದು ಆಹ್ಲಾದವೆನಿಸುತ್ತದೆ
ಈಗ ಅವನ ಪಲ್ಲಂಗದಲ್ಲಿ
ದಿನಕ್ಕೆ ನೂರಾರು ಕವಿತೆಗಳು
ಬಣ್ಣ ಬಳೆದುಕೊಂಡು ಅರಳುತ್ತವೆ
ಅದನ್ನು ಇನ್ನೊಬ್ಬಳ
ಎದೆಗಿಳಿಸುತ್ತಿದ್ದಾನೆ..
ಬಹಶಃ ಅವನೂ ಮುಂದೊಮ್ಮೆ
ನನ್ನಂತೆ ಖಾಲಿ ಎದೆಯಾಗುತ್ತಾನೆ
ರಾತ್ರಿಗಳ ಕಣ್ಣಲ್ಲಿ ಕನಸು ತಮಸ್ಸಿನ
ಹಾದಿಗಿಳಿದಾಗ ….
ಮತ್ತು ಮತ್ತೊಂದು
ಎದೆಗಳಿಗಿಳಿದು ದೋಚುತ್ತಾ
ಹೊಸದೊಂದು ಸಂಕಲನದ
ಸಿದ್ಧತೆ ನಡೆಸುತ್ತಾನೆ..!!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…