ಕವಿತೆಗಳು

ಹೇಮಲತಾ ಮೂರ್ತಿ ಅವರ ‘ಕಳೆದು ಹೋದ ಕವಿತೆ!’

 

                                                        

ಅಕ್ಷರಗಳು ಎದೆಯಿಂದ
ಅಳಿಸಿಹೋಗಿ ಬಹಳ ದಿನಗಳೇ
ಆದವು..

ಈ ಮೊದಲು ಇರುಳೆಂದರೇ
ಕಣ್ತುಂಬ ಅಕ್ಷರಗಳೇ ಅವನ
ನಗು, ಪಿಸುಮಾತು, ಬೈಗುಳ
ತುಟಿಯ ಕೊಂಕು ಹೀಗೆ..
ಅಕ್ಷರಗಳ ಸಾಲು ಸಾಲು
ಎದೆಗಿಳಿದು ಜಾವಕ್ಕೊಂದರಂತೆ
ಕವಿತೆಗಳು ಕನಸಾಗಿ ಕಣ್ತುಂಬಿಕೊಳ್ಳುತ್ತಿತ್ತು

ಈಗಲೂ ಇರುಳಾಗುತ್ತದೆ
ಅವನೂ ಸಹ ನೆನಪಾಗುತ್ತಾನೆ
ಮೊದಲು ಮಾತು ಕಸಿದು ಕೊಂಡಿದ್ದು,
ನಂತರ ನಗು, ನಿದ್ದೆ,ಬಕಾಸುರನವನು
ಎದೆಯ ಅಕ್ಷರಗಳನ್ನು ಬಿಡದೆ ಬಾಚಿಕೊಂಡು
ಸದ್ದಾಗದಂತೇ ತೇಗುತ್ತಾನೆ

ಖಾಲಿತನದ ಖುಷಿಯಲ್ಲೇ
ಕವಿತೆ ಕಳಿದದ್ದು ಆಹ್ಲಾದವೆನಿಸುತ್ತದೆ

ಈಗ ಅವನ ಪಲ್ಲಂಗದಲ್ಲಿ
ದಿನಕ್ಕೆ ನೂರಾರು ಕವಿತೆಗಳು
ಬಣ್ಣ ಬಳೆದುಕೊಂಡು ಅರಳುತ್ತವೆ
ಅದನ್ನು ಇನ್ನೊಬ್ಬಳ
ಎದೆಗಿಳಿಸುತ್ತಿದ್ದಾನೆ..

ಬಹಶಃ ಅವನೂ ಮುಂದೊಮ್ಮೆ
ನನ್ನಂತೆ ಖಾಲಿ ಎದೆಯಾಗುತ್ತಾನೆ
ರಾತ್ರಿಗಳ ಕಣ್ಣಲ್ಲಿ ಕನಸು ತಮಸ್ಸಿನ
ಹಾದಿಗಿಳಿದಾಗ ….

ಮತ್ತು ಮತ್ತೊಂದು
ಎದೆಗಳಿಗಿಳಿದು ದೋಚುತ್ತಾ
ಹೊಸದೊಂದು ಸಂಕಲನದ
ಸಿದ್ಧತೆ ನಡೆಸುತ್ತಾನೆ..!!

SHANKAR G

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago