ಮನದ ನೋವಿಗೆ
ಮಸಣದ ಮೌನವು ಕೂಗಿದೆ
ಕನಸಿನ ಬಾಗಿಲಿಗೆ
ಕಾಸಿನ ಬೀಗವು ತೂಗಿದೇ
ಆಸೆ ಕರಗಿರಲು
ಕನಸು ಕಾದಿರಲು
ಮನಸಲಿ ನಿನ್ನಯ
ನೆನಪಿನ ಹಣತೆಯು
ನೋವಿನ ಎಣ್ಣೆಯಲ್ಲಿ ಉರಿದಿದೆ.
ಕಣ್ಣ ಕಣ್ಣೀರ್ಗೇ
ಕಾಗದದ ಕವಿತೆಯು
ಸಾಂತ್ವಾನ ನೀಡಿದೆ
ಸಿಗದ ಪ್ರೀತಿಗೆ
ಕಾಣದ ಕಲ್ಪನೆಯು
ಕನಸನ್ನು ಕಟ್ಟಿದೆ……
ಚಲಿಸುವ ಕಾಲದಲಿ
ಮನುಷ್ಯನ ಸ್ವಭಾವವು
ಸತ್ಯ ಧರ್ಮವ ತೊರೆದಿದೆ
ಕಾಸಿನ ಕಣ್ಣಿಗೆ
ಮನದ ಬಯಕೆಗಳು
ಕತ್ತಲ ಕೋಣೆಯ ಸೇರಿವೆ.
ಮನಸಿಗೆ ಬೇಸರ
ಸಾವಿಗೆ ಸಡಗರ
ಮಾಸಿದ ಮನಸಿಗೆ
ಬಾಡಿದ ಹೂಆಸೆಗೆ
ಅಳುವ ಕಣ್ಣಿಗೆ
ನಿನ್ನ ಪ್ರೀತಿಯೇ ಚೈತನ್ಯ ತಂದಿದೆ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…