ಕವಿತೆಗಳು

ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

ಮನದ ನೋವಿಗೆ
ಮಸಣದ ಮೌನವು ಕೂಗಿದೆ
ಕನಸಿನ ಬಾಗಿಲಿಗೆ
ಕಾಸಿನ ಬೀಗವು ತೂಗಿದೇ
ಆಸೆ ಕರಗಿರಲು
ಕನಸು ಕಾದಿರಲು
ಮನಸಲಿ ನಿನ್ನಯ
ನೆನಪಿನ ಹಣತೆಯು
ನೋವಿನ ಎಣ್ಣೆಯಲ್ಲಿ ಉರಿದಿದೆ.

ಕಣ್ಣ ಕಣ್ಣೀರ್ಗೇ
ಕಾಗದದ ಕವಿತೆಯು
ಸಾಂತ್ವಾನ ನೀಡಿದೆ
ಸಿಗದ ಪ್ರೀತಿಗೆ
ಕಾಣದ ಕಲ್ಪನೆಯು
ಕನಸನ್ನು ಕಟ್ಟಿದೆ……

ಚಲಿಸುವ ಕಾಲದಲಿ
ಮನುಷ್ಯನ ಸ್ವಭಾವವು
ಸತ್ಯ ಧರ್ಮವ ತೊರೆದಿದೆ
ಕಾಸಿನ ಕಣ್ಣಿಗೆ
ಮನದ ಬಯಕೆಗಳು
ಕತ್ತಲ ಕೋಣೆಯ ಸೇರಿವೆ.

ಮನಸಿಗೆ ಬೇಸರ
ಸಾವಿಗೆ ಸಡಗರ
ಮಾಸಿದ ಮನಸಿಗೆ
ಬಾಡಿದ ಹೂಆಸೆಗೆ
ಅಳುವ ಕಣ್ಣಿಗೆ
ನಿನ್ನ ಪ್ರೀತಿಯೇ ಚೈತನ್ಯ ತಂದಿದೆ.

SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago