ಮನದ ನೋವಿಗೆ
ಮಸಣದ ಮೌನವು ಕೂಗಿದೆ
ಕನಸಿನ ಬಾಗಿಲಿಗೆ
ಕಾಸಿನ ಬೀಗವು ತೂಗಿದೇ
ಆಸೆ ಕರಗಿರಲು
ಕನಸು ಕಾದಿರಲು
ಮನಸಲಿ ನಿನ್ನಯ
ನೆನಪಿನ ಹಣತೆಯು
ನೋವಿನ ಎಣ್ಣೆಯಲ್ಲಿ ಉರಿದಿದೆ.
ಕಣ್ಣ ಕಣ್ಣೀರ್ಗೇ
ಕಾಗದದ ಕವಿತೆಯು
ಸಾಂತ್ವಾನ ನೀಡಿದೆ
ಸಿಗದ ಪ್ರೀತಿಗೆ
ಕಾಣದ ಕಲ್ಪನೆಯು
ಕನಸನ್ನು ಕಟ್ಟಿದೆ……
ಚಲಿಸುವ ಕಾಲದಲಿ
ಮನುಷ್ಯನ ಸ್ವಭಾವವು
ಸತ್ಯ ಧರ್ಮವ ತೊರೆದಿದೆ
ಕಾಸಿನ ಕಣ್ಣಿಗೆ
ಮನದ ಬಯಕೆಗಳು
ಕತ್ತಲ ಕೋಣೆಯ ಸೇರಿವೆ.
ಮನಸಿಗೆ ಬೇಸರ
ಸಾವಿಗೆ ಸಡಗರ
ಮಾಸಿದ ಮನಸಿಗೆ
ಬಾಡಿದ ಹೂಆಸೆಗೆ
ಅಳುವ ಕಣ್ಣಿಗೆ
ನಿನ್ನ ಪ್ರೀತಿಯೇ ಚೈತನ್ಯ ತಂದಿದೆ.
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…