ಕಣ್ಣೀರು ಹಾಕುವ ಮೊಸಳೆಗಳು
ಹೆಗಲು ಏರಿ ಹಾರಿವೆ ಬಾನೆತ್ತರ
ಬಾಯಲ್ಲಿ ಪಾಸಿಟಿವ್ ಬೆಣ್ಣೆ
ಹಿಡಿದ ಗೋಸುಂಬೆಗಳು
ಮಿಂಚಿವೆ ಮಿರಮಿರ
ಗುಂಪಿಗೆ ಸೇರದ ವಿಜಾತಿ
ಜಾಣ ನರಿಗಳ ಕೊಳೆತ ವಾಸನೆ
ಸಭ್ಯತೆಯ ಗೋರಿಯೊಳಗೆ
ಪಾಪ ಮೂಳೆ ಸವೆಸಿಕೊಂಡ
ನಿಯತ್ತಿನ ನಾಯಿಗಳು
ಬೀದಿಗೆ ಬಿದ್ದು ಬಡಕಲಾಗಿವೆ
ಬಾಡೂಟದ ಮಾತು ಬದಿಗಾಯ್ತು
ಹೊತ್ತು ಕೂಳಿಗೂ ದಿಕ್ಕಿಲ್ಲ
ಬೀದಿ ಬದಿ ಜಾಗವಿಲ್ಲ
ಕಣ್ಣೆತ್ತಿ ನೋಡುವವರ ಸುಳಿವಿಲ್ಲ
ಸತ್ಯ ಬೊಗಳುವ ನಾಯಿಗೆ
ಸಂತಾನ ಹರಣ ಚಿಕಿತ್ಸೆ
ಇಲ್ಲವೇ ಗಡಿಪಾರು
ಮರು ಬೊಗಳುವ
ಧೈರ್ಯ ತೋರಿದರೆ ವಿಷಮದ್ದು
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…