ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ
ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ
ಹಾದಿಯ ಇಕ್ಕೆಲಗಳಲ್ಲಿ ಚಿಗುರುವ ಹಸಿರು ಲತೆ ಕಣ್ಮನ ತಣಿಸುವ ಬಗೆ ಬಗೆ ಜಾತಿಯ ಕುಸುಮಗಳು
ಮನವ ಸೆಳೆಯುವ ಸೃಷ್ಟಿಯ ಈ ಕೌತುಕಕ್ಕೆ ಏನೆಂದು ಹೆಸರಿಡಲಿ ಸಖಿ
ಒಮ್ಮೊಮ್ಮೆ ಧುತ್ತೆಂದು ಎದುರಾಗುವ ಬೆಟ್ಟ ಗುಡ್ಡಗಳ ಕಲ್ಲು ಮುಳ್ಳುಗಳು ನೀಡುವ ನೋವು
ದಿಕ್ಕು ಕಾಣದೆ ಕಂಗಾಲಾಗಿ ನಿಂತ ಗಳಿಗೆಯಲ್ಲಿ ದಾರಿ ತೋರುವ ಕಾಣದ ಕೈಗೆ ಏನೆಂದು ಹೆಸರಿಡಲಿ ಸಖಿ
ದಾರಿ ಸವೆಸುತ ಪಯಣ ಸಾಗಿರಲು ಅಲ್ಲಲ್ಲಿ ಆಕಸ್ಮಿಕವಾಗಿ ಗೋಚರಿಸುವ ಅಪೂರ್ವ ಸೊಬಗಿನ ರಮ್ಯ ತಾಣಗಳು
ಖುಷಿಯಲ್ಲಿ ಇಹವ ಮರೆತು ಅದರೊಳು ಬೆರೆತಿರಲು ಕ್ಷಣದಲ್ಲಿ ಮಿಂಚಿ ಮಾಯವಾಗುವ ಸವಿ ಬಂಧಕ್ಕೆ ಏನೆಂದು ಹೆಸರಿಡಲಿ ಸಖಿ
ಜೀವನ ಯಾನದಿ ಸಾಗುವ ದಾರಿಯಲ್ಲಿ ಅಚ್ಚಳಿಯದೆ ಉಳಿದಿವೆ ಹಲವು ನೆನಪಿನ ಹೆಜ್ಜೆಗಳ ಗುರುತು
ಉಸಿರಿರುವವರೆಗೂ ನಿಸರ್ಗ ನಿನಾದೆಯ ಹೃದಯವ ಬೆಸಿದುಕೊಂಡಿರುವ ಈ ಚಂದದ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…