ಕವಿತೆಗಳು

ಮಂಜುಳಾ ಗೌಡ ಕಾರವಾರ ಅವರು ಬರೆದ ಗಜಲ್

ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ
ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ

ಹಾದಿಯ ಇಕ್ಕೆಲಗಳಲ್ಲಿ ಚಿಗುರುವ ಹಸಿರು ಲತೆ ಕಣ್ಮನ ತಣಿಸುವ ಬಗೆ ಬಗೆ ಜಾತಿಯ ಕುಸುಮಗಳು
ಮನವ ಸೆಳೆಯುವ ಸೃಷ್ಟಿಯ ಈ ಕೌತುಕಕ್ಕೆ ಏನೆಂದು ಹೆಸರಿಡಲಿ ಸಖಿ

ಒಮ್ಮೊಮ್ಮೆ ಧುತ್ತೆಂದು ಎದುರಾಗುವ ಬೆಟ್ಟ ಗುಡ್ಡಗಳ ಕಲ್ಲು ಮುಳ್ಳುಗಳು ನೀಡುವ ನೋವು
ದಿಕ್ಕು ಕಾಣದೆ ಕಂಗಾಲಾಗಿ ನಿಂತ ಗಳಿಗೆಯಲ್ಲಿ ದಾರಿ ತೋರುವ ಕಾಣದ ಕೈಗೆ ಏನೆಂದು ಹೆಸರಿಡಲಿ ಸಖಿ

ದಾರಿ ಸವೆಸುತ ಪಯಣ ಸಾಗಿರಲು ಅಲ್ಲಲ್ಲಿ ಆಕಸ್ಮಿಕವಾಗಿ ಗೋಚರಿಸುವ ಅಪೂರ್ವ ಸೊಬಗಿನ ರಮ್ಯ ತಾಣಗಳು
ಖುಷಿಯಲ್ಲಿ ಇಹವ ಮರೆತು ಅದರೊಳು ಬೆರೆತಿರಲು ಕ್ಷಣದಲ್ಲಿ ಮಿಂಚಿ ಮಾಯವಾಗುವ ಸವಿ ಬಂಧಕ್ಕೆ ಏನೆಂದು ಹೆಸರಿಡಲಿ ಸಖಿ

ಜೀವನ ಯಾನದಿ ಸಾಗುವ ದಾರಿಯಲ್ಲಿ ಅಚ್ಚಳಿಯದೆ ಉಳಿದಿವೆ ಹಲವು ನೆನಪಿನ ಹೆಜ್ಜೆಗಳ ಗುರುತು
ಉಸಿರಿರುವವರೆಗೂ ನಿಸರ್ಗ ನಿನಾದೆಯ ಹೃದಯವ ಬೆಸಿದುಕೊಂಡಿರುವ ಈ ಚಂದದ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ

SHANKAR G

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago