ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ
ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ
ಹಾದಿಯ ಇಕ್ಕೆಲಗಳಲ್ಲಿ ಚಿಗುರುವ ಹಸಿರು ಲತೆ ಕಣ್ಮನ ತಣಿಸುವ ಬಗೆ ಬಗೆ ಜಾತಿಯ ಕುಸುಮಗಳು
ಮನವ ಸೆಳೆಯುವ ಸೃಷ್ಟಿಯ ಈ ಕೌತುಕಕ್ಕೆ ಏನೆಂದು ಹೆಸರಿಡಲಿ ಸಖಿ
ಒಮ್ಮೊಮ್ಮೆ ಧುತ್ತೆಂದು ಎದುರಾಗುವ ಬೆಟ್ಟ ಗುಡ್ಡಗಳ ಕಲ್ಲು ಮುಳ್ಳುಗಳು ನೀಡುವ ನೋವು
ದಿಕ್ಕು ಕಾಣದೆ ಕಂಗಾಲಾಗಿ ನಿಂತ ಗಳಿಗೆಯಲ್ಲಿ ದಾರಿ ತೋರುವ ಕಾಣದ ಕೈಗೆ ಏನೆಂದು ಹೆಸರಿಡಲಿ ಸಖಿ
ದಾರಿ ಸವೆಸುತ ಪಯಣ ಸಾಗಿರಲು ಅಲ್ಲಲ್ಲಿ ಆಕಸ್ಮಿಕವಾಗಿ ಗೋಚರಿಸುವ ಅಪೂರ್ವ ಸೊಬಗಿನ ರಮ್ಯ ತಾಣಗಳು
ಖುಷಿಯಲ್ಲಿ ಇಹವ ಮರೆತು ಅದರೊಳು ಬೆರೆತಿರಲು ಕ್ಷಣದಲ್ಲಿ ಮಿಂಚಿ ಮಾಯವಾಗುವ ಸವಿ ಬಂಧಕ್ಕೆ ಏನೆಂದು ಹೆಸರಿಡಲಿ ಸಖಿ
ಜೀವನ ಯಾನದಿ ಸಾಗುವ ದಾರಿಯಲ್ಲಿ ಅಚ್ಚಳಿಯದೆ ಉಳಿದಿವೆ ಹಲವು ನೆನಪಿನ ಹೆಜ್ಜೆಗಳ ಗುರುತು
ಉಸಿರಿರುವವರೆಗೂ ನಿಸರ್ಗ ನಿನಾದೆಯ ಹೃದಯವ ಬೆಸಿದುಕೊಂಡಿರುವ ಈ ಚಂದದ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…