ಮಾತಿನ ಮಂಟಪ ಕಟ್ಟಿ
ಭರವಸೆಗಳ ಗೋಪುರ ಕುಟ್ಟಿ
ಹಣದ ಮಳೆಯ ,
ಮದ್ಯದ ಹೊಳೆಯ
ಕರುನಾಡಲಿ ಮೌನದಿ ಹರಿಸಿ;
ಎದುರಾಳಿಗೆ ಜಾತೀಯ
ಕತ್ತಿಯ ತೋರಿಸಿ,
ಧರ್ಮದ ನಶೆಯನು
ನರರಿಗೆ ಏರಿಸಿ;
ಉಚಿತವೆಂಬ ಸ್ವರ್ಗದ ಬಾವಿಗೆ
ಹಗಲಲ್ಲೇ ಬೀಳಿಸಿ;
ಮತದಾರರ ಮನದಿ ಗೊಂದಲಗಳ
ಸರಮಾಲೆಯ ಮೂಡಿಸಿ;
ಆಸೆಯ ಅರಮನೆಯ ಕಟ್ಟುವೆವೆಂದು
ನಯವಂಚಿಸಿ;
ಮಾನವೀಯತೆಯ ಮಣ್ಣುಪಾಲು
ಮಾಡಿ;
ಜನರ ಎದೆಯಲಿ ದ್ವೇಷದ ಬೆಂಕಿಯ
ಅಂಟಿಸಿ;
ಕುರ್ಚಿಯ ಮೋಹದಲಿ
ಸಂಚು ಹೂಡಿ, ಹೊಂಚುಹಾಕಿ
ರಾಜಕೀಯದ;
ಪಟ್ಟುಗಳ ಕುಲುಮೆಯಲಿ
ಕಾಯಿಸಿದ ಕಬ್ಬಿಣದಂತೆ,
ಅಧಿಕಾರವ ಹಿಡಿಯಲು,
ಹಸಿರು ಬಾವುಟದ
ಆಗಮನಕ್ಕೆ
ಜಾತಕ ಪಕ್ಷಿಯಂತೆ
ಕಾಯುತಿವೆ;
ಕರುಣೆಯಿಲ್ಲದ
ಎದೆಗಳು
ಅಧಿಕಾರದ ನರಿಗಳು!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…