1) ನೆಪ..!
ನೆಪಗಳೇ ಹಾಗೆ..
ಹೊಳೆಯಲ್ಲಿ ಮುಳುಗುವವನಿಗೆ
ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ!
ನೆಪಗಳೇ ಹಾಗೆ..
ಬರುವುದು ಭೀಕರ ಬರಗಾಲದಲ್ಲಿ
ಅಕಾಲಿಕ ಮಳೆಯಂತೆ ತಂಪು ಚೆಲ್ಲಿ!
ನೆಪಗಳೇ ಹಾಗೆ..
ಕುಂಟುತ್ತಿದ್ದರೂ ಮಾತು ಮಾತಿಗೆ
ಊರುಗೋಲಾದಂತೆ ನಡೆವವನಿಗೆ!
ನೆಪಗಳೇ ಹಾಗೆ..
ಕಂಡ ಪದ್ಮಪತ್ರದ ಜಲ ಬಿಂದು
ಅಂಟದಂತೆ ಸಂದರ್ಭದ ಬಂಧು!
ನೆಪಗಳೇ ಹಾಗೆ..
ತಕ್ಷಣ ಸಿಕ್ಕಿದ ಪರಿಹಾರ
ವಿರಾಮಕೆ ಇಳಿಸಿದ ಮನೋಭಾರ!
ನೆಪಗಳೇ ಹಾಗೆ..
ಸುಳ್ಳು ಸುಳ್ಳಿನ ಕಂತೆ
ಸತ್ಯದ ತಲೆಮೊಟುಕಿ ಚಿಗುರಿದಂತೆ!
ನೆಪಗಳೇ ಹಾಗೆ..
ದಾರಿಗಾಣದ ಕಗ್ಗತ್ತಲ ರಾತ್ರಿಗೆ
ಕಲ್ಪನೆ ಕನಸಿನಂತೆ ಹಿಡಿವ ಕೈದೀವಿಗೆ!
2) ಆ ಮುಖ….!
ಇರುವುದೊಂದೇ ಬಾಳ ಹಾದಿಯಲಿ,
ಸದಾ ನಗೆ ಹೂವು ಅರಳುತಿರಲಿ!
ಸೋಲು ಬಂದಾಗಲೂ ನಡುನಡುವಲಿ,
ಅದರ ಆ ಮುಖ ಕಣ್ಮುಂದೆ ಕಾಣದಿರಲಿ!
ನಿತ್ಯ ಕನಸುಗಳ ಜಾತ್ರೆಯಲಿ,
ಹಿರಿಮೆ ಗರಿಮೆಗಳ ತೇರಾಗಲಿ!
ಇಟ್ಟ ಗಮ್ಯಕ್ಕೆ ಅಡ್ಡಿ ಮಾಡುವವರಿರಲಿ,
ಅವರ ಆ ಮುಖ ಕಣ್ಮುಂದೆ ನಿಲ್ಲದಿರಲಿ!
ಬದುಕು ಭರವಸೆಯ ಜಾಡಿನಲಿ,
ಉಚ್ವಾಸ ನಿಶ್ವಾಸದಿ ಚೈತನ್ಯ ಬರಲಿ!
ಉಸಿರುಗಟ್ಟಿಸುವ ವಾತಾವರಣವೇ ಇರಲಿ,
ಆತಂಕದ ಆ ಮುಖ ಕಣ್ಮುಂದೆ ಸುಳಿಯದಿರಲಿ!
ಜೀವಮಾನದ ಒಟ್ಟು ಕಾಲಾವಧಿಯಲಿ,
ಆತ್ಮವಿಶ್ವಾಸವು ಎಂದೂ ತುಂಬಿ ತುಳುಕಿರಲಿ!
ಸಾವು ಬರುವುದಾದರೂ ಬೇಗ ಬಂದುಬಿಡಲಿ,
ನರಳಾಟದ ಆ ಮುಖ ಕಣ್ಮುಂದೆ ತೋರದಿರಲಿ!
ಮಂಜುಳಾ ಜಿ. ಎಸ್. ಪ್ರಸಾದ್
ಸಹ ಶಿಕ್ಷಕರು,
ಸ ಹಿ ಪ್ರಾ ಶಾಲೆ ಯಲುವಹಳ್ಳಿ
ಚಿಕ್ಕಬಳ್ಳಾಪುರ ಜಿಲ್ಲೆ.
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…