ಸಾಹಿತ್ಯ ಸುದ್ದಿ

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ,

ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ “ಬಿದಿರ ತಡಿಕೆ”, “ಮಳೆ ಪ್ರಬಂಧಗಳು”, “ಇರುವೆ ಮತ್ತು ಗೋಡೆ”, “ಬೆನ್ನೇರಿದ ಬಯಲು”, “ಪ್ರೇಮ ದೈವಿಕ ಪರಿಮಳ” ಮತ್ತು “Love is a Divine Fragrance” ಪುಸ್ತಕಗಳಿಗೆ ನೀವು ತೋರಿದ ಪ್ರೀತಿ ಮರೆಯಲಾಗದ್ದು. ಬಹಳಷ್ಟು ಪ್ರತಿಗಳು ರಾಜ್ಯದ ಪ್ರತಿಷ್ಠಿತ ಪುಸ್ತಕ ಮಳಿಗೆಯಾದ ಸಪ್ನಾದಲ್ಲಿಯು ಮಾರಾಟವಾಗಿವೆ. ನಿಜ ಹೇಳಬೇಕೆಂದರೆ ಪ್ರಕಾಶನದ ಮೂಲಕ ಹಣ ಕಳೆದುಕೊಂಡೆವು ಎಂದೇ ಎಲ್ಲರು ಲೋಕರೂಢಿಯಾಗಿ ಹೇಳುತ್ತಾರೆ, ಆದರೆ ನಮಗಂತೂ ಈ ಅನುಭವವಾಗಿಲ್ಲ! ತಕ್ಕಮಟ್ಟಿಗೆ ಹಾಕಿದ ಹಣದ ವಾಪಾಸಿನ ಜೊತೆಗೆ, ಅರ್ಧದಷ್ಟು ಲಾಭವಂತು ಆಗಿದೆ.

ಇದೇ ಹುಮ್ಮಸ್ಸಿನಿಂದಾಗಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕದ ಜೊತೆ ಮತ್ತೆ ಬಂದಿದ್ದೇವೆ. ಈ ಮಹತ್ವದ ಪುಸ್ತಕವನ್ನು ಖರೀದಿಸುವ ಮೂಲಕ ಅದೇ ರೀತಿಯ ಪ್ರೋತ್ಸಾಹವನ್ನು ಕೊಡುವಿರಿ ಎಂದು ನಂಬಿಕೊಂಡಿದ್ದೇವೆ. ಸಮಕಾಲೀನ ಹಿರಿಯ ಕವಿಗಳಲ್ಲಿ ಚನ್ನಪ್ಪ ಅಂಗಡಿ ಅವರು ಪ್ರಮುಖರು. ೨೦೨೪ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ ಈ ಸಂಕಲನದಲ್ಲಿ ಅನೇಕ ಮಹತ್ವದ, ನಾವೆಲ್ಲರೂ ಓದಲೇಬೇಕಾದ ಕವಿತೆಗಳಿವೆ. ಕಾವ್ಯ ಪಕ್ಷಪಾತಿಯಾದ ಯಾರಾದರೂ ಸರಿ ಈ ಸಂಕಲವನ್ನು ಓದಲೇಬೇಕು. ಕೆಲವು ಕವಿತೆಗಳಲ್ಲಿ ವಚನ ಕಾಲದ ಚಿತ್ರಣದ ಜೊತೆಗೆ ಇಲ್ಲಿನ ಕವಿತೆಗಳು ಸಮಕಾಲೀನ ಯುಗಕ್ಕೆ ಹರಿಯುವ ಪರಿ ಇದೆಯಲ್ಲ ಅದರ ಅನುಭವವನ್ನು ನಾವು ಕವಿತೆಗಳನ್ನು ಓದಿಯೇ ಪಡೆಯಬೇಕು. ಬಹಳ ಉತ್ತಮವಾದ ಕವಿತೆಗಳಿರುವ ಈ ಸಂಕಲವನ್ನು ನೀವು ಖರೀದಿಸಿ ಓದಬೇಕೆಂದು, ಯಾರಾದರೂ ಸರಿ ವಯಕ್ತಿಕವಾಗಿಯು ಶಿಫಾರಸು ಮಾಡುತ್ತಾರೆ.

ಪುಸ್ತಕದ ಬೆಲೆ 125 ರೂಪಾಯಿಗಳು. ಪುಸ್ತಕ ಬೇಕಾದವರು ಈ ನಂಬರಿಗೆ 9591367320 ವಾಟ್ಸಪ್ಪ್ ಮಾಡಿ. ಮುಂಗಡ ಬುಕಿಂಗ್ ಮಾಡುವವರಿಗೆ ಪೋಸ್ಟಲ್ ಚಾರ್ಜ್ ಉಚಿತ.

ಧನ್ಯವಾದಗಳು,
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ

 

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

SHANKAR G

View Comments

  • Downloaded a few games from 89fgamedownload.net. Some work great, others... well, let's just say your mileage may vary. Be sure to read reviews and check specs first, but there are some gems to be found. 89fgamedownload

  • Bet123apostas is worth checking out! Their bonuses are actually really nice. They have a good selection of sports events to punt, if you are into that. Here's where you can bet: bet123apostas.

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago